ಗೇರುಕಟ್ಟೆ: ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಹಾಲಿ ವ್ಯವಸ್ಥಪನಾ ಸಮಿತಿಯನ್ನು ಜುಲೈ 30 ಕ್ಕೆ ರದ್ದುಗೊಳಿಸಿ, ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೊಸ ಸಮಿತಿ ಆಗುವವರೆಗೆ ದೈನಂದಿನ ಚಟುವಟಿಕೆಗಳಿಗೆ ನಡೆಸಲು ಮಾತ್ರ ಅವಕಾಶ ಇದೆ. ಹೊಸ ಹಣಕಾಸಿನ ವ್ಯವಹಾರ ನಡೆಸದಂತೆ ನ್ಯಾಯಾಲಯದ ಆದೇಶ ಜಾರಿಯಾಗಿದೆ ಇದನ್ನು ಪಾಲಿಸುವಂತೆ ಕಕ್ಷೀದಾರರಾದ ದಿವಾಕರ ಆಚಾರ್ಯ ಮತ್ತು ಜನಾದ೯ನ ಪೂಜಾರಿ ಅವರು ನೀಡಿರುವ ಮಾಹಿತಿ ಮತ್ತು ದಾಖಲೆಯನ್ವಯ ನ್ಯಾಯವಾದಿ ಪ್ರಸಾದ್ ಕೆ.ಎಸ್ ದೇವಸ್ಥಾನದ ಅಧ್ಯಕ್ಷರಿಗೆ ತಿಳುವಳಿಕೆ ಪತ್ರ ನೀಡಿದ್ದಾರೆ.













