July 23, 2026
ಸಂಘ-ಸಂಸ್ಥೆಗಳು

ನಾಲ್ಕು ರೋಟರಿ ಸಮುದಾಯ ದಳಗಳ (ಆರ್. ಸಿ.ಸಿ) ಪದಗ್ರಹಣ


ಮುಂಡಾಜೆ :ಬೆಳ್ತಂಗಡಿ ರೋಟರಿ ಕ್ಲಬ್ ನ ನಾಲ್ಕು ಅಂಗ ಸಂಸ್ಥೆಗಳಾದ ಆರ್.ಸಿ.ಸಿ ಮುಂಡಾಜೆ, ಆರ್.ಸಿ.ಸಿ ಕಕ್ಕಿಂಜೆ, ಆರ್.ಸಿ.ಸಿ ಕಲ್ಮಂಜ, ಆರ್.ಸಿ.ಸಿ ನೆರಿಯ ಇವುಗಳ ಪದಗ್ರಹಣ ಕಾರ್ಯಕ್ರಮವು ಮುಂಡಾಜೆಯ ಸಿ.ಎ ಬ್ಯಾಂಕ್ ನಲ್ಲಿ ನಡೆಯಿತು. ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೊ. ಡಾ ಜಯಕುಮಾರ್ ಶೆಟ್ಟಿ ನಾಲ್ಕೂ ಆರ್.ಸಿ.ಸಿ ಗಳ ಪದಗ್ರಹಣ ಕಾರ್ಯ ನೆರವೇರಿಸಿದರು.


ಮುಂಡಾಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀ ಪಿ ಸಿ ಸೆಬಾಸ್ಟಿಯನ್ , ಕಾರ್ಯದರ್ಶಿಯಾಗಿ ಶ್ರೀ ರಾಕೇಶ್, ಕೋಶಾಧಿಕಾರಿಯಾಗಿ ಶ್ರೀ ರಂಗನಾಥ ಹೆಬ್ಬಾರ,
ಕಕ್ಕಿಂಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಶ್ರೀ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಶ್ರೀ ಪ್ರಾನ್ಸಿಸ್ ವಿ ಪಿ,.


ಕಲ್ಮಂಜ ಆರ್.ಸಿ.ಸಿ ಅಧ್ಯಕ್ಷರಾಗಿ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ, ದಿನೇಶ್ ಗೌಡ, ಕೋಶಾಧಿಕಾರಿಯಾಗಿ ಜಯಂತ್ ರಾವ್, ನೆರಿಯ ಆರ್ ಸಿ.ಸಿ ಸಂಸ್ಥೆಯ ಅಧ್ಯಕ್ಷ ಪಿ.ಕೆ ಬಾಲನ್, ಕಾರ್ಯದರ್ಶಿ ಬಿ.ಎಂ.ಶರೀಫ್ ಕೋಶಾಧಿಕಾರಿಯಾಗಿ ಎಂ.ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಿದರು.


ಪ್ರತಿಯೊಂದು ಆರ್. ಸಿ.ಸಿ ಅಧ್ಯಕ್ಷರು ತಾವು ಮುಂದೆ ಮಾಡಲಿರುವ ಸೇವಾ ಕಾರ್ಯಗಳ ವಿವರ ನೀಡಿದರು. ಅಧ್ಯಕ್ಷ ಸ್ಥಾನ ವಹಿಸಿದ ರೋಟರೀ ಕ್ಲಬ್ ಅಧ್ಯಕ್ಷರು ಪ್ರತಿ ಆರ್ ಸಿ.ಸಿ ಕ್ಲಬ್ ಗಳಿಗೆ ರೂ 20,000/- ಮ್ಯಾಚಿಂಗ್ ನೆರವು ಘೋಷಿಸಿದರು. ಹೊಸ ಸದಸ್ಯರಿಗೆ ಸರ್ಟಿಫಿಕೇಟ್ ನೀಡಲಾಯಿತು. ಆರ್ ಸಿ.ಸಿ. ಚೆಯರ್ ಮ್ಯಾನ್ ರೊ.ನಾರಾಯಣ ಭಿಡೆಯವರು ಸ್ವಾಗತ ಮಾಡಿದರು. ಕಾರ್ಯದರ್ಶಿ ರೊ. ಡಾ.ಎಂ.ಎಂ. ದಯಾಕರ್ ಶುಭ ಕೋರಿದರು. ಮುಂಡಾಜೆ ಸದಸ್ಯೆ ಅಶ್ವಿನಿ ಹೆಬ್ಬಾರ್ ಪ್ರಾರ್ಥನೆ ಮಾಡಿದರು, ಮುಂಡಾಜೆ ಆರ್ ಸಿ.ಸಿ. ಕಾರ್ಯದರ್ಶಿ ರಾಕೇಶ್ ವಂದನಾರ್ಪಣೆಗೈದರು. ರೊ. ವೆಂಕಟೇಶ್ ಭಟ್ ರವರು ಸಾರ್ಜೆಂಟ್ ಎಟ್ ಆರ್ಮ್ಸ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಮೇಜರ್ ಜನೆರಲ್ ಎಂ.ವಿ.ಭಟ್, ಸಂದೇಶ್ ರಾವ್, ಶ್ರೀಧರ್ ಕೆ.ವಿ, ಪ್ರವೀಣ ಗೋರೆ, ಕಿರಣ್ ಹೆಬ್ಬಾರ್ ದಂಪತಿಗಳು ಹಾಗೂ ಆ್ಯನ್ ಗೀತಾ ಪ್ರಭು ಭಾಗವಹಿಸಿದರು.

Related posts

ಗೇರುಕಟ್ಟೆ ಶ್ರೀಧರ ಮುಗೇರ ಸಂಶಯಾಸ್ಪದ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಪ.ಜಾತಿ, ಪಂಗಡ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಒತ್ತಾಯ

Suddi Udaya

ಮಚ್ಚಿನ ಪ್ಯಾಕ್ಸ್ ನ ನೂತನ ಕಟ್ಟಡ ಅನಂತ ಲೋಕಾರ್ಪಣೆ

Suddi Udaya

ಬಿಎಮ್ಎಸ್ ನ 70ನೇ ವರ್ಷದ ಕಾಯಕ್ರಮ: ಡಾ.ಮೋಹನ್ ಜೀ ಭಾಗವತ್ ಅವರ ಸಮಾರೋಪ ಭಾಷಣ ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭವನದಲ್ಲಿ ನೇರಪ್ರಸಾರ ವೀಕ್ಷಣೆ

Suddi Udaya

ಭಾರತದ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ರವರಿಂದ ಸಿರಿ ಸಂಸ್ಥೆಯ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ

Suddi Udaya

ಮಚ್ಚಿನ ಸಿ.ಎ. ಬ್ಯಾಂಕ್ ಚುನಾವಣೆ: ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು

Suddi Udaya

ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿ ತನುಷ್ ಎಂ. ಶೆಟ್ಟಿ ನೇಮಕ

Suddi Udaya
error: Content is protected !!