September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಶಿವಳ್ಳಿ ಸಮಾಜದ ಸಭೆ

ಬೆಳ್ತಂಗಡಿ: ನಮ್ಮ ಋಷಿ ಮುನಿಗಳು ಗೊತ್ರಗಳನ್ನು ನಿರ್ಧರಿಸಿದ್ದಾರೆ. ಇದಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಪ್ರತೀ ವ್ಯಕ್ತಿಯೂ ನಮ್ಮ ಋಷಿ ಮುನಿಗಳು ರೂಪಿಸಿದ ದಾರಿಯಲ್ಲಿ ಮುಂದುವರಿಯಬೇಕು. ಇದರಿಂದ ಜೀವನದಲ್ಲಿ ಸಂಸ್ಕಾರ ಆನಂದ ದೊರೆಯುತ್ತದೆ. ಮತ್ತು ಹಿರಿಯರ ನೆನಪುನೊಂದಿಗೆ ಕುಟುಂಬ ಪದ್ದತಿಯು ಬೆಳೆಯುತ್ತದೆ. ಪರಂಪರೆ ಸಂಸ್ಕ್ರತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರು ನೀಡಿದ ಸಂಸ್ಕಾರವನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹಿರಿಯ ವಿದ್ವಾಂಸ ಶ್ರೀನಿಧಿ ಅಮ್ಮಣ್ನಾಯ ಕೊಕ್ಕಡ ನುಡಿದರು.


ಅಡ್ಕಾಡಿ ಶ್ರೀಕರ ರಾವ್ ಅವರ ಮನೆಯಲ್ಲಿ ನಡೆದ ವಲಯ ಶಿವಳ್ಳಿ ಸಮಾಜದ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ಮಾರ್ಗದರ್ಶನ ನೀಡಿದ್ದರು.


ಈ ಸಂದರ್ಭದಲ್ಲಿ ಅವರಿಗೆ ಸಮಾಜದ ವತಿಯಿಂದ ಅಭಿನಂದನೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಪುರಂದರ ರಾವ್ ವಹಿಸಿದ್ದರು.
ತಾಲೂಕು ಪ್ರತಿನಿಧಿ ಅಡ್ಕಾಡಿ ಸುಧೀರ ರಾವ್ ಸ್ವಾಗತಿಸಿದ್ದರು. ಸಭೆಯಲ್ಲಿ ಮಹಿಳಾ ಸಮಿತಿಯ ಪಧಾಧಿಕಾರಿಗಳು , ವಿವಿಧ ವಿಭಾಗದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Related posts

ರೋಟರಿ ಕ್ಲಬ್ ಮಡಂತ್ಯಾರ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

Suddi Udaya

ಭಾರಿ ಗಾಳಿ ಮಳೆ: ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಹಾರಿ ಹೋದ ಮನೆಯ ಶೀಟು

Suddi Udaya

ಧರ್ಮಸ್ಥಳ: ಮುಂಡ್ರುಪಾಡಿ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya
error: Content is protected !!