ಕಳೆಂಜ : ನಂದಗೋಕುಲ ಗೋಶಾಲೆ ಕಳೆಂಜ ಇದರ ವತಿಯಿಂದ ಕಿರಣ್ಚಂದ್ರ ಡಿ. ಪುಷ್ಪಗಿರಿ ಧಾರ್ಮಿಕ ಮುಖಂಡರು ಉರುವಾಲು ಇವರ ನಿವಾಸಕ್ಕೆ ಭೇಟಿ ನೀಡಿದರು. ಗೋಶಾಲೆಯ ಕಾರ್ಯ ಚಟುವಟಿಕೆಗಳು, ನಿರ್ವಹಣೆ, ಮೂಲ ಸೌಕರ್ಯ, ಸಂಪನ್ಮೂಲ ಕ್ರೂಡೀಕರಣ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಧಾರ್ಮಿಕ, ಸಾಮಾಜಿಕ ನೇತಾರ ಕಿರಣ್ಚಂದ್ರ ಡಿ. ರವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಡಾ|| ಎಮ್ ಎಮ್ ದಯಾಕರ್ ಮತ್ತು ಉಪಾಧ್ಯಕ್ಷ ನಾರಾಯಣ ಗೌಡ, ಗೋಶಾಲೆ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿಗಾರ್, ವಿಶ್ವ ಹಿಂದು ಪರಿಷತ್ ತಾಲೂಕು ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಗೌಡ ಉಂಕ್ರೊಟ್ಟು, ಭಾರತೀಯ ಮಸ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ನಾಥ್, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಷ್ಪ ಆರ್. ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಶೋಭ ವಿ ಶೆಟ್ಟಿ, ಸಂತೋಷ್ ನೇಕಾರ ಪೇಟೆ, ಕಛೇರಿ ಸಿಬ್ಬಂದಿಗಳಾದ ಗೋಪಾಲ, ಕವಿತಾ, ದೀಪಿಕಾ, ಉಪಸ್ಥಿತರಿದ್ದರು.











