25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರಿನಲ್ಲಿ ಶ್ರೀಕೃಷ್ಣ ಮಾರ್ಟ್ ಶುಭಾರಂಭ

ವೇಣೂರು: ವೇಣೂರು ಎಸ್.ಎಸ್. ಕಾಂಪ್ಲೆಕ್ಸ್‌ ನಲ್ಲಿ ಶ್ರೀಕೃಷ್ಣ ಮಾರ್ಟ್ ಸೆ.29ರಂದು ಶುಭಾರಂಭಗೊಂಡಿತ್ತು.

ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್‌ ಸಿಂಹ ನಾಯಕ್ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವೇಣೂರು ಎಸ್.ಎಸ್. ಕಾಂಪ್ಲೆಕ್ಸ್‌ನ ಮಾಲಕ ಮಹೇಶ್ ಯು.ಎಸ್., ಕಾರ್ಯವಾಹಿಕಾ ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ವಿಭಾಗದ ಗಿರಿಜಾ ಭಟ್, ವೇಣೂರು ವರ್ತಕರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಪೈ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ್ ಭಟ್ ಎಮ್., ಡಾ| ಶ್ರೀಹರಿ ದಂಪತಿಗಳು, ಅರವಿಂದ್, ಗಣೇಶ್, ಮೊಹಮ್ಮದ್ ವೇಣೂರು, ಅರುಣ್ ಕ್ರಾಸ್ತಾ, ಶ್ರೀಮತಿ ಸುಮಂಗಲ ಶ್ರೀಕೃಷ್ಣ ಮತ್ತು ಶ್ರೀಕೃಷ್ಣ ಕಾಂತಾಜೆ, ಶ್ರೀಮತಿ ಶ್ರುತಿ ನಂದನ್, ಡಾ| ನಂದಕಿಶೋರ್ ಬೈಕುಂಜೆ, ಗಣೇಶ್ ಭಟ್, ಕೃಷ್ಣ ಭಟ್ ಉಪಸ್ಥಿತರಿದ್ದರು.

ಮಾಲಕ ಶ್ರವಣ್ ಸ್ವಾಗತಿಸಿ, ಶ್ರುತಿ ಶ್ರವಣ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀಕೃಷ್ಣ ಮಾರ್ಟ್ ನಲ್ಲಿ ಸಿಗುವ ಸೌಲಭ್ಯ: ದಿನಬಳಕೆ ದಿನಸಿ ಸಾಮಾಗ್ರಿಗಳು, ಬೇಕರಿ ತಿಂಡಿಗಳು, ಶಾಲಾ ಮಕ್ಕಳ ಪುಸ್ತಕಗಳು, ಸ್ಟೇಷನರಿ ಸಾಮಾಗ್ರಿಗಳು, ಹಾರ್ಡ್‌ ವೇರ್ , ಪ್ಲಾಸ್ಟಿಕ್ ಸಮಾಗ್ರಿಗಳು ಇನ್ನಿತರ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರ ತಿಳಿಸಿದರು.

Related posts

ಮರೋಡಿ ಕ್ಷೇತ್ರ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Suddi Udaya

ತೆಕ್ಕಾರು : ಕುಟ್ಟಿಕಳ ರಾಧು ರವರ ಮನೆ ಭಾಗಶಃ ಕುಸಿತ

Suddi Udaya

ಧರ್ಮಸ್ಥಳ : ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಡುಗೆ

Suddi Udaya

ಇಂದಬೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿದ ಮಳೆ ನೀರು ಹಾಗೂ ರಸ್ತೆಯುದ್ದಕ್ಕೂ ಬಾಗಿ ನಿಂತ ಅಪಾಯಕಾರಿ ಮರಗಳು

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ: ಹೈಕೋರ್ಟು ಆದೇಶ

Suddi Udaya

ಧರ್ಮಸ್ಥಳ ಗ್ರಾ.ಪಂ. ನಿಂದ ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಜಾಹೀರಾತು ಫಲಕ ತೆರವು

Suddi Udaya
error: Content is protected !!