23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೊಯ್ಯೂರು ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

ಕೊಯ್ಯೂರು ಸರಕಾರಿ ಪ್ರೌಢಶಾಲೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಎಂಬ ಆಯುಧದಿಂದ ನಾವು ಜಗತ್ತನ್ನು ಗೆಲ್ಲಬಹುದು. ಇವತ್ತು ಜ್ಞಾನ ಎಂದರೆ ಅಂಕಗಳು ಎಂಬಂತೆ ಕಂಡು ಬರುತ್ತದೆ. ಆದರೆ ಅಂಕಗಳಿಂದ ಅಳತೆ ಮಾಡಲಾಗದ ಎಷ್ಟೋ ಜ್ಞಾನಗಳು ಇಂದು ನಮಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಹಳ್ಳಿಜೀವನಕ್ರಮದಲ್ಲಿ ಕಂಡು ಬರುವ ಜ್ಞಾನವನ್ನು ಹೆಚ್ಚಾಗಿ ಪಡೆದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯವಂತ ಸತ್ಪ್ರಜೆಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ರಾಮಚಂದ್ರ ದೊಡಮನಿ, ಮೋಹನದಾಸ, ಪ್ರವೀಣ ಕುಮಾರ್ ಹೆಚ್, ಗೀತಾ, ಸುಧಾಕರ ಶೆಟ್ಟಿ ಮತ್ತು ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ಪ್ರಸ್ತಾಪನೆಯೊಂದಿಗೆ ಸ್ವಾಗತಿಸಿದರು. ಬೇಬಿ ಕಾರ್ಯಕ್ರಮ ನಿರೂಪಿಸಿದರು. ದೀಪ್ತಿ ಹೆಗ್ಡೆ ವಂದಿಸಿದರು.

ಉಚಿತ ಸಮವಸ್ತ್ರ, ಪುಸ್ತಕ ವಿತರಿಸಲಾಯಿತು. ಬಳಿಕ ಸಿಹಿಯೂಟ ನೀಡಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.

Related posts

ಎಸ್‌ವೈಎಸ್‌ ಉರುವಾಲು ಪದವು ಸರ್ಕಲ್ ಸಮಿತಿ: ಅಧ್ಯಕ್ಷರಾಗಿ ಎಸ್‌.ಪಿ. ಮುಹಮ್ಮದ್ ಮುಸ್ತಫಾ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕನ್ಯಾರಕೋಡಿ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

Suddi Udaya

ಕನ್ಯಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮನೀಶ್, ಕಾರ್ಯದರ್ಶಿ ಶ್ರೇಯಸ್ಸು

Suddi Udaya

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಬಿ.ಅಶ್ರಫ್ ನೆರಿಯ ಆಯ್ಕೆ

Suddi Udaya

ಮಹಾವೀರ ಜಯಂತಿ ರಜೆ ಹಿನ್ನಲೆ ಮಾ.30ರಂದು ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

Suddi Udaya

ಜೆಸಿಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಬೆಳ್ತಂಗಡಿ ಕಿರಣ್ ಕುಮಾರ್ ಶೆಟ್ಟಿ ರಿಗೆ ಸನ್ಮಾನ

Suddi Udaya
error: Content is protected !!