ಬೆಳ್ತಂಗಡಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ನವೆಂಬರ್ 15 ರಿಂದ ಆರಂಭವಾಗಲಿದೆ. ಈ ಸಾಲಿನ ಕಂಬಳ ಕೂಟದ ಅಧಿಕೃತ ವೇಳಾಪಟ್ಟಿ ಸೆ.28ರಂದು ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ನಡೆಯುವ ಜೋಡುಕರೆ ಕಂಬಳಗಳಾದ ಬಳ್ಳಮಂಜ ಶೇಷ-ನಾಗ, ಬಂಗಾಡಿ ಸೂರ್ಯ-ಚಂದ್ರ ಹಾಗೂ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಡೆಯಲಿದೆ.
ಕಳೆದ ಬಾರಿ ವೇಳಾಪಟ್ಟಿ ಪ್ರಕಟವಾದಾಗ ಬೆಂಗಳೂರು ಮತ್ತು ಶಿವಮೊಗ್ಗ ಕಂಬಳಗಳ ಉಲ್ಲೇಖ ಮಾಡಲಾಗಿತ್ತು. ಆದರೆ ಕಾರಾಣಾಂತರಗಳಿಂದ ಕಂಬಳ ಕೂಟ ಆಯೋಜನೆ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ರಾಜಧಾನಿ ಮತ್ತು ಶಿವಮೊಗ್ಗದಲ್ಲಿ ಕಂಬಳ ನಡೆಸುವ ಉಲ್ಲೇಖ ಮಾಡಲಾಗಿಲ್ಲ.
ವೇಳಾಪಟ್ಟಿ
ನವೆಂಬರ್ 15 – ಪಣಪಿಲ
ನವೆಂಬರ್ 22 – ಕೊಡಂಗೆ
ನವೆಂಬರ್ 29 – ಕಕ್ಕೆಪದವು
ಡಿಸೆಂಬರ್ 6 – ಹೊಕ್ಕಾಡಿ
ಡಿಸೆಂಬರ್ 7 – ಬಳ್ಳಮಂಜ
ಡಿಸೆಂಬರ್ 13 – ಬಾರಾಡಿ
ಡಿಸೆಂಬರ್ 20 – ಮುಲ್ಕಿ
ಡಿಸೆಂಬರ್ 27 – ಮಂಗಳೂರು
2026ರ ಜನವರಿ 3 – ಮಿಯ್ಯಾರು
ಜನವರಿ 10 – ನರಿಂಗಾಣ
ಜನವರಿ 17 – ಅಡ್ಡೆ
ಜನವರಿ 24 -ಮೂಡುಬಿದಿರೆ
ಜನವರಿ 31- ಐಕಳ
ಫೆಬ್ರವರಿ 7 – ಪುತ್ತೂರು
ಫೆಬ್ರವರಿ 14 – ಜಪ್ಪು
ಫೆಬ್ರವರಿ 21 – ವಾಮಂಜೂರು
ಫೆಬ್ರವರಿ 28 – ಎರ್ಮಾಳು
ಮಾರ್ಚ್ 7 – ಬಂಟ್ವಾಳ
ಮಾರ್ಚ್ 15 – ಬಂಗಾಡಿ
ಮಾರ್ಚ್ 21 – ವೇಣೂರು
ಮಾರ್ಚ್ 28 – ಉಪ್ಪಿನಂಗಡಿ
ಏಪ್ರಿಲ್ 4 – ಗುರುಪುರ
ಏಪ್ರಿಲ್ 11- ಬಳ್ಳುಂಜೆ











