ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಗೆ ದುಬೈ ಉದ್ಯಮಿಗಳು ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಪೂಜಾರಿ ಬೆಳಪು, ಮತ್ತು ಪ್ರಭಾಕರ ಸುವರ್ಣ ಕರ್ನಿರೆ ಇಂದು ಭೇಟಿ ಕೊಟ್ಟು ವಿಶೇಷ ಅಲಂಕಾರ ಮತ್ತು ಅನ್ನದಾನದ ಸೇವೆಯನ್ನು ಕೈಗೊಂಡರು.

ಕ್ಷೇತ್ರದ ವತಿಯಿಂದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಯವರು ಅವರನ್ನು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ ರಾಜಾರಾಮ್, ಜೊತೆ ಕಾರ್ಯದರ್ಶಿ ಜಯ ವಿಕ್ರಂ, ಯಕ್ಷಗಾನ ಮೇಳದ ಮುಖ್ಯ ಸಂಚಾಲಕ ಪ್ರಮಾಲ್ ಕುಮಾರ್ ಜೊತೆಗಿದ್ದರು.











