25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಕ್ಕೇಡಿ ಬುಳೆಕ್ಕರ ಶ್ರೀ ಶಾರದಾಂಭ ಭಜನಾ ಮಂಡಳಿ ಅಧ್ಯಕ್ಷರಾಗಿ ಶಶಿಕಲಾ, ಕಾರ್ಯದರ್ಶಿಯಾಗಿ ತೃಪ್ತಿ

ಕುಕ್ಕೇಡಿ: ಬುಳೆಕ್ಕರ ಶಾರದನಗರ ಶ್ರೀ ಶಾರದಾಂಭ ಭಜನಾ ಮಹಿಳಾ ಮಂಡಳಿ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆಯು ಭಜನಾ ಮಂದಿರದಲ್ಲಿ ನಡೆಯಿತು.

ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಮಂಡಳಿಯ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ವೇದಿಕೆಯಲ್ಲಿ ವಿಶ್ವನಾಥ್ ದೇವಾಡಿಗ, ನಾರಾಯಣ ನಾಯ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಪವಿತ್ರ ಕಮಲಾಕ್ಷ ದರ್ಬೆ ಉಪಸ್ಥಿತರಿದ್ದರು. ಬಳಿಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಶಿಕಲಾ ಜಗದೀಶ್ ದರ್ಬೆ, ಕಾರ್ಯದರ್ಶಿಯಾಗಿ ತೃಪ್ತಿ ಕೆಂಗಾಜೆ, ಜೊತೆ ಕಾರ್ಯದರ್ಶಿಯಾಗಿ ಪೃಥ್ವಿ ವಿ. ಎಸ್. ದೇವಾಡಿಗ ಬುಳೆಕ್ಕಾರ, ಉಪಾಧ್ಯಕ್ಷರಾಗಿ ವಿನೋದ ರತ್ನಾಕರ್ ಪಾದೆ, ಸುನಂದ ಶಿವರಾಂ ಶೆಟ್ಟಿ ಪಾಪುದಡ್ಕ, ಮತ್ತು ಇತರ 25 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನವೀನ್ ಜಿ. ಸ್ವಾಗತಿಸಿದರು, ಜಗದೀಶ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕೊಪ್ಪಳ ಧನ್ಯವಾದವಿತ್ತರು.

Related posts

ಬಳಂಜ: ಅನಾರೋಗ್ಯದಿಂದ ವರದರಾಜ್ ಪೂಜಾರಿ ನಿಧನ

Suddi Udaya

ಪಿಲ್ಯ: ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ

Suddi Udaya

ಶಿಶಿಲ ಗ್ರಾ.ಪಂ ನಲ್ಲಿ ಕಸ್ತೂರಿರಂಗನ್ ವಿರೋಧಿಸುವ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನುಮ ದಿನ: ಬೆಳ್ತಂಗಡಿ ವರ್ತಕರ ಸಂಘದಿಂದ ಭೇಟಿ, ಗೌರವಾರ್ಪಣೆ

Suddi Udaya

ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟ: ಎಸ್.ಡಿ.ಎಂ ಕಾಲೇಜಿನ ಪುರುಷರ ತಂಡ ಪ್ರಥಮ ಹಾಗೂ ಮಹಿಳೆಯರ ತಂಡ ದ್ವಿತೀಯ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!