ಬೆಳ್ತಂಗಡಿ: ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ (job card ) ಹೊಂದಿರುವ ನಾಗರಿಕರು ಉದ್ಯೋಗ ಚೀಟಿಯ ಇ-ಕೆವೈಸಿ ಗಾಗಿ ತಮ್ಮ ಉದ್ಯೋಗ ಚೀಟಿ ಹಾಗೂ ಆಧಾರ್ ಚೀಟಿಯೊಂದಿಗೆ, ಕಚೇರಿ ಅವಧಿಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸುವಂತೆ ವಿನಂತಿಸಲಾಗಿದೆ.
ಮುಂದಿನ ದಿನಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸಬೇಕಾದಲ್ಲಿ ಮತ್ತು ಉದ್ಯೋಗ ಚೀಟಿಯನ್ನು ಚುನಾವಣೆ ಸಮಯದಲ್ಲಿ ಗುರುತು ಚೀಟಿಯಾಗಿ ಬಳಸಬೇಕಾದಲ್ಲಿ ಈಗಲೇ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.











