25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಕೀರ್ತನಾ ಕಲಾತಂಡದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಅವಲಕ್ಕಿ– ಬೆಲ್ಲ ವಿತರಣೆ

ಮುಂಡಾಜೆ : ಕೀರ್ತನಾ ಕಲಾತಂಡ ಮುಂಡಾಜೆ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತಂಡದ ಸದಸ್ಯರಿಗೆ ಅವಲಕ್ಕಿ– ಬೆಲ್ಲ ವಿತರಣೆ ಕಾರ್ಯಕ್ರಮ ಅ.19 ರಂದು ಗ್ರಾಮ ಪಂಚಾಯತ್ ಮುಂಡಾಜೆ ಸಭಾ ಭವನದಲ್ಲಿ
ತಂಡದ ಅಧ್ಯಕ್ಷರಾದ ಸದಾನಂದ ಬಿ ಮುಂಡಾಜೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ರಾಮಣ್ಣ ಶೆಟ್ಟಿ ಅಗರಿ, ಬಾಬು ಪೂಜಾರಿ ಕೂಳೂರು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಮಧು ಶೆಟ್ಟಿ ಹುರ್ತಾಜೆ ಅಧ್ಯಕ್ಷೀಯ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಉಮೇಶ್ ಆಚಾರ್ಯ, ಪ್ರದೀಪ್ ಶೆಟ್ಟಿ ನಾಗಂಡ, ಲೀಲಾವತಿ ನಾಯ್ಕ, ಪುರಂದರ ಗೌಡ, ಚಂದ್ರ ಶೇಖರ ಗೌಡ, ಮನೋಹರ ನಾಯ್ಕ, ಸದಾಶಿವ ನಾಯ್ಕ ಪಣಿಕಲ್ಲು, ನಂದೀಶ್ ಭಂಡಾರಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತೆಂಕು ತಿಟ್ಟಿನ ಶ್ರೇಷ್ಠ ಭಾಗವತರಾದ ದಿನೇಶ್ ಅಮ್ಮಣ್ಣಾಯರಿಗೆ ನುಡಿನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕುಮಾರಿ ಜೀತಿಕ್ಷಾ ಸ್ವಾಗತಿಸಿ, ಕೇಶವ ಮುಂಡಾಜೆ ಧನ್ಯವಾದ ನೀಡಿದರು. ಸದಾನಂದ ಬಿ ಮುಂಡಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

Suddi Udaya

ಸುಲ್ಕೇರಿ ಮಹಾಮಾಯಿ ದೇವಸ್ಥಾನಕ್ಕೆ ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಿಂದ ಚೆಂಡೆ, ದೀಪಾ, ಮತ್ತು ಕಹಳೆ ಸಮರ್ಪಣೆ

Suddi Udaya

ಕೊಕ್ಕಡ: ತೆಂಕುಬೈಲಿನಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನಾಗತಂಬಿಲ

Suddi Udaya

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 94.11 ಫಲಿತಾಂಶ

Suddi Udaya

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ದ.ಕ.ಜಿಲ್ಲಾ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನಿರ್ದೇಶಕರಾಗಿ ಗುರುಪ್ರಸಾದ್ ಆಯ್ಕೆ

Suddi Udaya
error: Content is protected !!