September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

ಬೆಳ್ತಂಗಡಿ ರೋಟರಿ ಕ್ಲಬ್ ನಡೆಸಿದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಉಜಿರೆಯ ಶ್ರೀ ಧ.ಮ ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ನಡೆಯಿತು.

ರೋಟರೀ ಕ್ಲಬ್ ನ ಅಧ್ಯಕ್ಷ ರೊ. ಪ್ರೊ ಪ್ರಕಾಶ ಪ್ರಭು ಸ್ವಾಗತಿಸಿದರು. ವಲಯ ನಾಲ್ಕು (ಬಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ ಎ. ಜಯಕುಮಾರ್ ಶೆಟ್ಟಿಯವರು ಉದ್ಛಾಟನೆ ಮಾಡಿದರು. ವಲಯ ನಾಲ್ಕು (ಡಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ. ರಾಜಾರಾಮರು ಇಂದಿನ ಎಲ್ಲಾ ವರ್ಗದ ಜನರು, ಈ ಶಟಲ್ ಬ್ಯಾಡ್ಮಿಂಟನ್ ಆಟ ಆರೋಗ್ಯವನ್ನು ಕಾಪಾಡಲು ಹೇಗೆ ಸಹಕಾರಿ ಎಂದು ವಿವರಿಸಿದರು.

ವೇದಿಕೆಯಲ್ಲಿ ಕ್ಲಬ್ ವಿಸ್ತರಣಾ ಅಧ್ಯಕ್ಷೆ ರೋ| ಶ್ರುತಿ ಮಾರ್ಥಾ , ಜಿಲ್ಲಾ ಬ್ಯಾಡ್ಮಿಂಟನ್ ಚೆಯರ್ ಮ್ಯಾನ್ ಹಾಗೂ ರೋಟರೀ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷ ರೋ. ಪ್ರಶಾಂತ್ ಶೆಣೈ, ಬೆಳ್ತಂಗಡಿ ರೋಟರಿ ಕ್ಲಬ್ ನ ಕ್ರೀಡಾ ಚೇರ್ ಮ್ಯಾನ್ ರೋ. ಆದರ್ಶ ಕಾರಂತ ಉಪಸ್ಥಿತರಿದ್ದರು. ಕಾರ್ಯದರ್ಶಿ ರೊ. ಡಾ ಎಂ ಎಂ ದಯಾಕರ್ ವಂದಿಸಿದರು.
ಒಟ್ಟು 14 ರೋಟರಿ ಕ್ಲಬ್ ಗಳ ರೋಟೇರಿಯನ್ಸ, ಆ್ಯನ್ಸ, ಆ್ಯನೆಟ್ಸಗಳಿಗೆ, ಸಿಂಗಲ್ಸ, ಡಬಲ್ಸ ಮತ್ತು ಮಿಕ್ಸೆಡ್ ಡಬಲ್ಸ – ಹೀಗೆ ವಯಸ್ಸಿಗೆ ಅನುಗುಣವಾಗಿ ಒಟ್ಟು 17 ವಿವಿಧ ವರ್ಗಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Related posts

ನೆರಿಯ: ಬೈಲಂಗಡಿ ಬಸದಿಯ ಪ್ರಧಾನ ಅರ್ಚಕ ಮಿತ್ರಸೇನಾ ಇಂದ್ರ ನಿಧನ

Suddi Udaya

ಎಕ್ಸಲೆಂಟ್ ವಾಣಿಜ್ಯ ವಿಭಾಗ – ಮರು ಮೌಲ್ಯಮಾಪನದಲ್ಲಿ 2 ರ‍್ಯಾಂಕ್ ಸೇರ್ಪಡೆ

Suddi Udaya

ಬೆಳ್ತಂಗಡಿ ವುಮೆನ್ ಇಂಡಿಯಾ ಮೂವ್ಮೆಂಟ್, ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ “ಎಕ್ಸೆಲ್” ಟೆಕ್ನೋ ಶಾಲೆಯಲ್ಲಿ ದೀಕ್ಷಾರಂಭ

Suddi Udaya

ಸೋಮಂತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya
error: Content is protected !!