ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಸಂಭ್ರಮ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ದೀಪಾವಳಿ ಆಚರಣೆಯನ್ನು ಸಂಭ್ರಮಿಸಲಾಯಿತು. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮಗು ಹಾಗೂ ತಂದೆಯೊಂದಿಗೆ ಗ್ರೀಟಿಂಗ್ ಕಾರ್ಡ್ ತಯಾರಿಯ ಸ್ಪರ್ಧೆಯನ್ನು ನೆರವೇರಿಸಲಾಯಿತು.

ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಶೃಂಗಾರ ಸ್ಪರ್ಧೆಯನ್ನು ಆಯೋಜಿಸಲಾಯಿತು. 9ನೇ ಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ 9ನೇ ಬಿ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಪ್ರಕಾಶ್ ಕಾಮತ್ ಪ್ರಾಂಶುಪಾಲರು ಎಸ್ ಡಿ ಎಂ ಮಹಿಳಾ ಪೊಲಿಟೆಕ್ನಿಕ್ ಕಾಲೇಜ್ ಉಜಿರೆ, ಇವರು ಭಾಗವಹಿಸಿ ಶುಭಾಶಯಗಳು ವ್ಯಕ್ತಪಡಿಸಿದರು. ಅಲ್ಲದೆ ದೀಪಾವಳಿಯ ಆಚರಣೆಯಲ್ಲಿ ನಮ್ಮ ಸಂಸ್ಥೆಗಳು ಮಕ್ಕಳಿಗೆ ಹೊಸ ಮೆರಗನ್ನು ನೀಡುತ್ತಿದೆ ಎಂಬುದರೊಂದಿಗೆ, ದೀಪ, ಹಣತೆ ಬೆಳಗಿಸಿ, ಲಕ್ಷ್ಮಿ ಪೂಜೆಯೊಂದಿಗೆ, ದೀಪಾವಳಿಗೆ ನೀರು ತುಂಬಿಸುವ ವಿಶೇಷತೆಯೊಂದಿಗೆ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕರುಗಳಾದ ಮೇನಿತಾ ಶೆಟ್ಟಿ, ಚೇತನ, ಕಾರೂಣ್ಯ, ಮುರಳಿ, ಪ್ರಮೀಳಾ ರವರ ಸಂಘಟನೆಯೊಂದಿಗೆ ಅಧ್ಯಾಪಕ ವೃಂದ ದವರ ಸಹಕಾರದೊಂದಿಗೆ, ಕುಮಾರಿ ನಿಧಿಶಾ ನಿರೂಪಿಸಿ, ಕುಮಾರಿ ದಿಶಾ ಡಿಎ ಸ್ವಾಗತಿಸಿ, ಆಧ್ಯಾ ಜೈನ್ ಧನ್ಯವಾದವಿತ್ತರು.

Related posts

ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ ಹಾಗೂ ಕೊಳಚೆ ನೀರು ನಿರ್ವಹಣೆ ಬಗ್ಗೆ ಸಮಾಲೋಚನೆ ಸಭೆ

Suddi Udaya

ಕಿಲ್ಲೂರಿನಲ್ಲಿ ಗ್ರಾಮೀಣ ಆಟಗಳ ಸಂಗಮ

Suddi Udaya

ಚಾರ್ಮಾಡಿ ಬೂತ್ ಸಂಖ್ಯೆ 21ರಲ್ಲಿ ಕೈ ಕೊಟ್ಟ ಮತ ಯಂತ್ರ

Suddi Udaya

ಮುಂಡಾಜೆ ಮತಗಟ್ಟೆ 74 ರಲ್ಲಿ ಕೈ ಕೊಟ್ಟ ಮತಯಂತ್ರ

Suddi Udaya

ಉಜಿರೆ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಗೆ 99.29% ಫಲಿತಾಂಶ

Suddi Udaya
error: Content is protected !!