ಕುತ್ಲೂರು ಅನಘ ಮನೆಯ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಗ್ರಾಮದ ಮಹಿಳೆಯರಿಗೆ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿಕೊಡುವಂತೆ ವೇಣೂರಿನ ಪೊಲೀಸ್ ಠಾಣಾಧಿಕಾರಿಯವರಿಗೆ ಕುತ್ಲೂರು ಗ್ರಾಮದ ಮಹಿಳೆಯರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆಯರಾಗಿರುವ ಶ್ರೀಮತಿ ಆಶಾಲತಾ ಮಹಾಬಲ ಪೂಜಾರಿ, ಸದಸ್ಯೆ ಶ್ರೀಮತಿ ಯಶೋಧಾ ನಿತ್ಯಾನಂದ ಪೂಜಾರಿ, ಮಾಜಿ ಸದಸ್ಯೆ ಶ್ರೀಮತಿ ಪ್ರಮೀಳಾ ರಾಮಚಂದ್ರ ಭಟ್, ಸೇವಾ ಪ್ರತಿನಿಧಿ ಶ್ರೀಮತಿ ಉಷಾ ಸಂತೋಷ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಪ್ರಜಾತಾ ಪ್ರಭಾಕರ ಹೆಗ್ಡೆ, ಕುತ್ಲೂರು ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ಜಗದೀಶ್ ಉಪಸ್ಥಿತರಿದ್ದರು.











