23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಥ್ಲೆಟಿಕ್ಸ್ ಕ್ರೀಡಾಕೂಟ : ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ 15 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಉಜಿರೆಯ : ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಅ.28ರಂದು ಜರಗಿದ 2025-26ನೇ ಸಾಲಿನ ಕೊಕ್ಕಡ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ 15 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ತರಬೇತಿ ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ವಿದ್ಯಾ ಟಿ. ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ಪ್ರಶಸ್ತಿ ವಿಜೇತರ ವಿವರ 17ರ ವಯೋಮಾನದ ಬಾಲಕರ ವಿಭಾಗ ಶ್ರೇಯಸ್: ಉದ್ದ ಜಿಗಿತ, ತ್ರಿವಿಧ ಜಿಗಿತ, ಗುಂಡೆಸೆತ, 4×100 ರಿಲೇ, 4×400 ರಿಲೇ ಪ್ರಥಮ ಸ್ಥಾನ. ಶ್ರವಣ್ ಶೆಟ್ಟಿ: 400 ಮೀ. ಓಟ, ಚಕ್ರ ಎಸೆತ, ಎತ್ತರ ಜಿಗಿತ, 4×100 ರಿಲೇ, 4×400 ರಿಲೇ ಪ್ರಥಮ ಸ್ಥಾನ. ಶಿವಾನಂದ: 4×100 ರಿಲೇ, 4×400 ರಿಲೇ ಪ್ರಥಮ; 100 ಮೀ. ಓಟ, 200 ಮೀ. ಓಟ, ಉದ್ದ ಜಿಗಿತ ದ್ವಿತೀಯ. ಶರತ್: 1,500 ಮೀ. ಓಟ ಪ್ರಥಮ. ಉತ್ತಮ್: 4×400 ರಿಲೇ ಪ್ರಥಮ. ಸ್ವಸ್ತಿಕ್: 4×100 ರಿಲೇ ಪ್ರಥಮ. ನಿಕೇಶ್: ತ್ರಿವಿಧ ಜಿಗಿತ ದ್ವಿತೀಯ.

17ರ ವಯೋಮಾನದ ಬಾಲಕಿಯರ ವಿಭಾಗ ರಂಸೀನಾ ಬಾನು: ತ್ರಿವಿಧ ಜಿಗಿತ ಪ್ರಥಮ.14ರ ವಯೋಮಾನದ ಬಾಲಕರ ವಿಭಾಗ
ಕೇತನ್: ಗುಂಡೆಸೆತ ಪ್ರಥಮ. ಶರಣ್: 100 ಮೀ. ಓಟ, ಉದ್ದ ಜಿಗಿತ, ಗುಂಡೆಸೆತ, 4×100 ರಿಲೇ ದ್ವಿತೀಯ. ಅಭಿಷೇಕ್: 4×100 ರಿಲೇ ದ್ವಿತೀಯ. ಗುರುಪ್ರಸಾದ್: 4×100 ರಿಲೇ ದ್ವಿತೀಯ. ಸನ್ವಿತ್. 4×100 ರಿಲೇ ದ್ವಿತೀಯ.

14ರ ವಯೋಮಾನದ ಬಾಲಕಿಯರ ವಿಭಾಗ ತನು: ಗುಂಡೆಸೆತ ಪ್ರಥಮ. ಶರಣ್ಯ: 80 ಮೀ. ಹರ್ಡಲ್ಸ್ ದ್ವಿತೀಯ.

Related posts

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಗ್ರಾಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 59.78 ಲಕ್ಷ ಲಾಭ , ಸದಸ್ಯರಿಗೆ ಶೇ. 7 ಡಿವಿಡೆಂಟ್ ಘೋಷಣೆ

Suddi Udaya

ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಜು.21 ರಿಂದ ಚಾತುರ್ಮಾಸ್ಯ ಆರಂಭ

Suddi Udaya

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ “ಪಂಜಿನ ಮೆರವಣಿಗೆ”

Suddi Udaya

ಓಡಿಲ್ನಾಳ: ಶ್ರೀ ಕ್ಷೇತ್ರ ನಾಗಚಾವಡಿಗೆ ಭಕ್ತರಿಂದ ಹರಿದು ಬಂದ ಹಸಿರುವಾಣಿ ಹೊರೆಕಾಣಿಕೆ; ವೈಭವದ ಮೆರವಣಿಗೆ, ಮೆರಗು ತಂದ ಕುಣಿತ ಭಜನೆ

Suddi Udaya
error: Content is protected !!