37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಪ್ಯಾಕ್ಸ್ ಚುನಾವಣೆ: 12 ಸ್ಥಾನಗಳಿಗೆ ಅಂತಿಮ ಕಣದಲ್ಲಿ24 ಮಂದಿ ಅಭ್ಯರ್ಥಿಗಳು: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ

ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ 12 ಸ್ಥಾನಗಳಿಗೆ ಚುನಾವಣೆ ಸಿದ್ದಗೊಂಡಿದ್ದು 24ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಬಾರ್ಯ ಪರಿಸರದಲ್ಲಿ ಚುನಾವಣೆಯ ಕಾವು ಈಗಾಗಲೇ ಪಸರಿಸಿದ್ದು 1322 ಮಂದಿ ಮತದಾರರಿದ್ದು ನ.೫ರಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮತದಾನ ನಡೆಯಲಿದೆ.

ಅ.25ರಂದು ನಾಮಪತ್ರ ಸಲ್ಲಿಕೆಯಾಗಿ, ಅ.29ರಂದು ಪರಿಶೀಲನೆಗೊಂಡು ಅ.30ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದ್ದು ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ 12 ಮಂದಿ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ನಡುವೆ ಪೈಪೋಟಿ ನಡೆಯಲಿದೆ.

ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಸಾಮಾನ್ಯ ಸ್ಥಾನದಿಂದ 6 ಮಂದಿ, ಅನುಸೂಚಿತ ಜಾತಿ ಹಾಗೂ ಪಂಗಡ ಮೀಸಲುವಿನಿಂದ, ಹಿಂದುಳಿದ ವರ್ಗ “ಎ” ಹಾಗೂ “ಬಿ” ಮೀಸಲು ಸ್ಥಾನದಿಂದ ತಲಾ ಒಂದರಂತೆ ಹಾಗೂ ಮಹಿಳಾ ಮೀಸಲು ಎರಡು ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದೆ.

ಸಾಮಾನ್ಯ ಸ್ಥಾನದಿಂದ ಆಶ್ರಫ್, ಪಿ.ಕೆ. ಉಸ್ಮಾನ್, ಗುರುಪ್ರಸಾದ್, ಚಂದ್ರಶೇಖರ್ ಕುಂಡಡ್ಕ, ಚಂದ್ರಶೇಖರ ಪೊರ್ಕಳ, ಪ್ರವೀಣ್ ರೈ, ಪ್ರಸನ್ನ ಗೌಡ, ಪ್ರಶಾಂತ್ ಪೈ ಎ, ಬಾಲಕೃಷ್ಣ ಶೆಟ್ಟಿ, ಶಿವಪ್ರಸಾದ್, ಮೋಹನ್ ಗೌಡ, ಹರ್ಷಿತ್ ಕೆ, ಹಿಂದುಳಿದ ವರ್ಗ “ಎ”ನಿಂದ ಶೀಧರ್ ಎನ್ ಮತ್ತು ಶೇಷಪ್ಪ ಸಾಲಿಯಾನ್, ಹಿಂದುಳಿದ ವರ್ಗ “ಬಿ”ನಿಂದ ಕಾಂತಪ್ಪ ಗೌಡ ಮತ್ತು ರಾಜೇಶ್ ರೈ, ಪರಿಶಿಷ್ಟ ಪಂಗಡದಿಂದ ಪುಷ್ಪಾ ಮತ್ತು ಶಿವಾರಮ್, ಪರಿಶಿಷ್ಟ ಜಾತಿಯಿಂದ ಜಯಂತಿ ಮತ್ತು ಸುರೇಶ ಸುಣ್ಣಾಜೆ ಮಹಿಳಾ ಮೀಸಲು ಕ್ಷೇತ್ರದಿಂದ ಉಷಾ, ಸರೋಜಿನಿ, ಸವಿತಾ ಹಾಗೂ ಹೇಮಾವತಿ ಅವರುಗಳ ನಡುವೆ ಪೈಪೋಟಿ ನಡೆಯಲಿದೆ.

Related posts

ಡಿ.13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

Suddi Udaya

ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು

Suddi Udaya

ಜ. 16-25: ಕಾಜೂರು ಉರೂಸ್ ಮಹಾ ಸಂಭ್ರಮ: ಜ.22 ಬ್ರಹತ್ ದ್ಸಿಕ್ರ್ ಮಜ್ಲಿಸ್, ಜ.25 ಉರೂಸ್ ಸಮಾರೋಪ

Suddi Udaya

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರದ ದರ್ಶನ ಪಡೆದ ಶಾಸಕ ಹರೀಶ್ ಪೂಂಜ

Suddi Udaya

ಹಾಟ್‌ಮಿಕ್ಸ್ ಘಟಕದ ವಿರುದ್ಧ ಪಿಐಎಲ್ ಸಲ್ಲಿಕೆ : ಹೈಕೋರ್ಟ್ ನಿಂದ ನೋಟಿಸ್ ಆದೇಶ

Suddi Udaya
error: Content is protected !!