ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಲಯನ್ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ನೀಡಿದ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ ಸಭೆ ಬೆಳ್ತಂಗಡಿಯಲ್ಲಿ ನಡೆಯಿತು.

ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ವಸಂತ ಕುಮಾರ್ ಶೆಟ್ಟಿಯವರು ಎಂ. ಜಿ. ಶೆಟ್ಟಿಯವರ ಕಾರ್ಯವೈಖರಿ, ದಿಟ್ಟತನ, ನಾಯಕತ್ವ ಗುಣ, ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ನೀಡಿದ ಬಗ್ಗೆ ನುಡಿ ನಮನದಲ್ಲಿ ವಿವರಿಸಿದರು. ಬೆಳ್ತಂಗಡಿ ಲಯನ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ. ಕೆ., ನಿಕಟಪೂರ್ವ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಸುಭಾಷಿಣಿ, ಲಿಯೋ ಅಧ್ಯಕ್ಷೆ ಡಾ. ಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಪ್ರಾಂತೀಯ ಅಧ್ಯಕ್ಷರುಗಳಾದ ವೆಂಕಟೇಶ್ ಹೆಬ್ಬಾರ್, ರಾಜು ಶೆಟ್ಟಿ, ನಿತ್ಯಾನಂದ ನಾವರ, ಪ್ರಕಾಶ್ ಶೆಟ್ಟಿ ನೊಚ್ಚ, ಧರಣೇಂದ್ರ.ಕೆ. ಜೈನ್, ಸ್ಥಾಪಕ ಸದಸ್ಯ ವಿಶ್ವನಾಥ್ ಆರ್. ನಾಯಕ್, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ಗೌಡ, ಉಮೇಶ್ ಶೆಟ್ಟಿ ಮುಂತಾದವರು ನುಡಿ ನಮನ ಸಲ್ಲಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ದಾ ನುಡಿನಮನ ಸಭೆಯನ್ನು ನಿರ್ವಹಿಸಿದರು. ಎಂ. ಜಿ. ಶೆಟ್ಟಿಯವರ ಕುಟುಂಬ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ಮಾಜಿ ಅಧ್ಯಕ್ಷರುಗಳಾದ ಸುಶೀಲ ಹೆಗ್ಡೆ, ಜಯಂತ್ ಶೆಟ್ಟಿ ಕುಂಟಿನಿ, ರವೀಂದ್ರ ಶೆಟ್ಟಿ ಬಳಂಜ ಲಯನ್ಸ್ ಸದಸ್ಯರುಗಳಾದ ಪ್ರತಿಭಾ ಹೆಬ್ಬಾರ್, ಎ. ಕೆ. ಶಿವನ್, ಪದ್ಮನಾಭ ಟಿ, ಕೃಷ್ಣ ಕೆ. ಆಚಾರ್, ಸುರೇಶ ಶೆಟ್ಟಿ ಲಾಯಿಲ, ವಿನ್ಸಿ ಟಿ. ಡಿಸೋಜ, ಮಂಜುನಾಥ್ ಜಿ., ತಂಗಚ್ಚನ್, ಸುಂದರಿ, ಗೋಪಾಲಕೃಷ್ಣ ಕಾಂಚೋಡು, ರಮೇಶ್, ತುಕಾರಾಮ್ ಬಿ., ರೀನಾ ಕೆ. ಜೆ., ಚಂದ್ರಶೇಖರ್ ಶೆಟ್ಟಿ ಕಿರಣ್ ಕುಮಾರ್ ಅನಂತ ಕೃಷ್ಣ ದತ್ತಾತ್ರೇಯ ಗೊಲ್ಲ ಸಭೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು.

Related posts

ದ್ವಿತೀಯ ಪಿಯುಸಿ ಪರೀಕ್ಷೆ- 2 ರ ಫಲಿತಾಂಶ : ವಾಣಿ ಪ.ಪೂ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ವಿಭಾ ಕೆ.ಆರ್ ರಾಜ್ಯಕ್ಕೆ 6ನೇ ಸ್ಥಾನ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆ

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ಮೋಹಿತ್ ಅವರಿಗೆ ಚಿನ್ನದ ಪದಕ

Suddi Udaya

ಅಖಿಲ ಭಾರತ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ಬೆಳ್ತಂಗಡಿ ಸೆಂಟರ್ ಗೆ ರಾಷ್ಟ್ರ ಮಟ್ಟದ ಮೋಸ್ಟ್ ಗ್ರೋವಿಂಗ್ ಸೆಂಟರ್ ರನ್ನರ್ ಅಪ್ ಪ್ರಶಸ್ತಿ

Suddi Udaya

ಭಾರತಿಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದಿಂದ ನಾರವಿ ಕುತ್ಲೂರು ಗ್ರಾಮದ ವಿಕಾಸ ಹಬ್ಬ

Suddi Udaya

ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya
error: Content is protected !!