ಬೆಳ್ತಂಗಡಿ: ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಇದರ 2026 ನೇ ಸಾಲಿನ ವಾರ್ಷಿಕ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೆಸರರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ನ.7ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.
ಈ ಬಾರಿಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ ಮಾತೊಶ್ರೀ ಕಂಬುಲ್ದೋಡಿ, ಕಜೆ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಆಳ್ವಾ ಚಪ್ಪನ್ನಗುರಿ ಬೆಳುವಾಯಿ ಇವರು ಆಯ್ಕೆಯಾದರು.
ಸಭೆಯಲ್ಲಿ ಜಯಾನಂದ ಎನ್ ಶೆಟ್ಟಿ ಗೆಂದೊಟ್ಟು, ಅಶೋಕ್ ಕುಮಾರ್ ಮಾಂಟ್ರಾಡಿ, ಅಪ್ಪು ಪೂಜಾರಿ ಕುಜುಂಬಡೆ, ಪ್ರವೀಣ್ ಕುಮಾರ್ ವಾಮದಪದವು, ಶಶಿಕುಮಾರ್, ಮಾನಸ, ರಮೇಶ್ ಪೂಜಾರಿ ಕಲ್ಲಡ್ಕ, ಸತೀಶ್ ಕೋಟ್ಯಾನ್, ರಮೇಶ್ ಟೈಲರ್ ಮಕ್ಕಿ, ಅಶೋಕ್ ಬಂಗೇರ ಗುಂಡದಪ್ಪು, ಕೆ ಲೋಕೇಶ್ ಎಲ್ ಎಸ್ ಬೊಟ್ಟು, ರಮೇಶ್ ಸಾಲ್ಯಾನ್ ಪಿಲಿಬಟ್ಟು ಮಕ್ಕಿ, ಶಮಿತ್ ರಾಜ್ ಎಸ್, ಮನ್ವಿತ್ ಎಸ್, ಸಂದೀಪ್ ಪಚ್ಚಾಡಿ, ಸುಕುಮಾರ್ ಪಚ್ಚಾಡಿ, ಶೈಲೇಶ್ ಕೇಂಬುಡಲ್ಕೇ, ಸೃಜನ್ ಗುಂಡದಪ್ಪು, ಲವೀಶ್ ಕುಮಾರ್, ಲಕ್ಷಿತ್ ಕುಮಾರ್, ಶ್ರೀಮತಿ ಸುನಿತಾ ಶೆಟ್ಟಿ ಬನ ಶ್ರೀ ಕಜೆ, ಶ್ರೀಮತಿ ನವನೀತ ಮಾನಸ, ಶ್ರೀಮತಿ ಗೀತಾ ಭಾಗ್ಯಶ್ರೀ ಗುಂಡದಪ್ಪು , ಶ್ರೀಮತಿ ಶಾಂತಿ ಎಸ್ ಕಂದೀರು ಶ್ರೀಮತಿ ಶೋಭಾ ಬೊಟ್ಟು, ಗುಂಡದಪ್ಪು, ಕುಮಾರಿ ಸುಧೀಕ್ಷಾ ನಂದಾದೀಪ, ಸುಮಂತ್ ಶಾಂತಿ ಮತ್ತಿ ತರರು ಉಪಸ್ಥಿತರಿದ್ದರು.
ವಾರ್ಷಿಕ ಮಹೋತ್ಸವವನ್ನು ಸುಸ್ವಾಂಗವಾಗಿ ನೆರವೇರಿಸುವ ಉದ್ದೇಶದಿಂದ ಸುಮಾರು 14 ಸಮಿತಿಗಳನ್ನು ರಚಿಸಲಾಯಿತು.
ವಾರ್ಷಿಕ ಪೂಜಾ ಮಹೋತ್ಸವ ವು ಜನವರಿ 19 ರಿಂದ 21 ರ ತನಕ 3 ದಿನ ಜರಗಲಿದೆ.











