30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ : ಬೆದ್ರಬೆಟ್ಟು ಮರಿಯಾಂಬಿಕಾ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ


ನಡ : ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ಬೆದ್ರಬೆಟ್ಟು ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಇಂಗ್ಲಿಷ್ ಕಂಠಪಾಠ ಕಿರಿಯರ ವಿಭಾಗದಲ್ಲಿ ಫಾತಿಮತ್ ಮಿನ್ಹ 4ನೇ ತರಗತಿ ಪ್ರಥಮ ಸ್ಥಾನ, ಹಿರಿಯರ ವಿಭಾಗದಲ್ಲಿ ಆರ್ನಿಕ 7ನೇ ತರಗತಿ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ : ಕಿರಿಯರ ವಿಭಾಗದಲ್ಲಿ ಮೊಹಮ್ಮದ್ ಅನಾಸ್ 4ನೇ ತರಗತಿ ತೃತೀಯ ಸ್ಥಾನ, ಹಿರಿಯರ ವಿಭಾಗದಲ್ಲಿ ಮೊಹಮ್ಮದ್ ಅಲಿ ಜಾಹಾರ್ 6ನೇ ತರಗತಿ ದ್ವಿತೀಯ ಸ್ಥಾನ, ಕನ್ನಡ ಕಂಠಪಾಠ ಕಿರಿಯರ ವಿಭಾಗದಲ್ಲಿ ಸಾನಿಕ 4ನೇ ತರಗತಿ ದ್ವಿತೀಯ ಸ್ಥಾನ, ಹಿರಿಯ ವಿಭಾಗದಲ್ಲಿ ಪ್ರತ್ಯೂಶ 7ನೇ ತರಗತಿ ತೃತೀಯ ಸ್ಥಾನ, ಧಾರ್ಮಿಕ ಪಠಣ ಸಂಸ್ಕೃತ ಹಿರಿಯರ ವಿಭಾಗದಲ್ಲಿ ಪೂರ್ವಿಕ 7ನೇ ತರಗತಿ ದ್ವಿತೀಯ ಸ್ಥಾನ, ಪ್ರಬಂಧ ಹಿರಿಯರ ವಿಭಾಗದಲ್ಲಿ ಲಿಖಿತ 7ನೇ ತರಗತಿ ದ್ವಿತೀಯ ಸ್ಥಾನ , ಅಭಿನಯ ಗೀತೆ ಹಿರಿಯರ ವಿಭಾಗದಲ್ಲಿ ಆತ್ಮಿಕ 7ನೇ ತರಗತಿ ದ್ವಿತೀಯ ಸ್ಥಾನ, ಭಕ್ತಿಗೀತೆ ಕಿರಿಯರ ವಿಭಾಗದಲ್ಲಿ ಹೃಶ್ವಿ ನಾಲ್ಕನೇ ತರಗತಿ ದ್ವಿತೀಯ ಸ್ಥಾನ, ಕ್ಲೇ ಮಾಡಲಿಂಗ್ ಹಿರಿಯರ ವಿಭಾಗದಲ್ಲಿ ಸನ್ವಿತ್ ಏಳನೇ ತರಗತಿ ಪ್ರಥಮ ಸ್ಥಾನ, ಚಿತ್ರಕಲೆ ಕಿರಿಯರ ವಿಭಾಗದಲ್ಲಿ ನಿಧಿ 4ನೇ ತರಗತಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಹೀಗೆ ನಾಲ್ಕು ವಿದ್ಯಾರ್ಥಿಗಳು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Related posts

ಜು. 22-23: ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ

Suddi Udaya

2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

Suddi Udaya

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ: ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಆದಿತ್ಯ ಕೊಲ್ಲಾಜೆ

Suddi Udaya

ಬಳಂಜ: ಸಂಜೀವ ದೇವಾಡಿಗ ನಿಧನ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya

ಜನಸ್ನೇಹಿ ಅಧಿಕಾರಿ ಜುಬಿನ್ ಮೊಹಾಪಾತ್ರ ದಿಢೀರ್ ವಗಾವಣೆ

Suddi Udaya
error: Content is protected !!