ಬೆಳ್ತಂಗಡಿ: ಹೈನುಗಾರಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ಮುಂಡೂರು ದುರ್ಗಾ ನಗರ ಹಾಲು ಉತ್ಪಾದಕರ ಸಂಘದ ಸದಸ್ಯರಾದ ರೋಷನ್ ಡಿಸೋಜ ರವರಿಗೆ ಮಡಂತ್ಯಾರಿನಲ್ಲಿನಡೆದ ದ.ಕ ಜಿಲ್ಲಾ ಮಟ್ಟದ ಸಹಕಾರಿ ಸಪ್ತಾಹದಲ್ಲಿ ‘ಕ್ಷೀರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಂಡೂರು ದುರ್ಗಾ ನಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಯಾದವ ಕುಲಾಲ್ ಸಂಘದ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ನಿರ್ದೇಶಕರು ಮತ್ತು ಸದಸ್ಯರು ಮತ್ತು ಕಾರ್ಯದರ್ಶಿ ಚೈತನ್ಯ ಮತ್ತು ರೇವತಿ ಇವರು ಉಪಸ್ಥಿತರಿದ್ದರು.











