ಪೆರಾಡಿ: ಮಡಂತ್ಯಾರುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದಲ್ಲಿ ಕೃಷಿ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಯನ್ನು ಪರಿಗಣಿಸಿ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.
ಸಂಘದ ಸಮಗ್ರ ಕೃಷಿ ರೈತ ಸದಸ್ಯರಾದ ಕಾಂತಪ್ಪ ಪೂಜಾರಿ ಕಲ್ಬೆಟ್ಟು ಕಾಶಿಪಟ್ಣ, ಪ್ರಸನ್ನ ದೇವಿ ವೀರನಿವಾಸ ಹೊಸಂಗಡಿ, ಜಾರಪ್ಪ ಪೂಜಾರಿ ಕಲ್ಲೊಟ್ಟು ಮರೋಡಿ ಇವರನ್ನು ಸನ್ಮಾನಿಸಲಾಯಿತು.
ಪೆರಾಡಿ ಸೊಸೈಟಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಸಿಇಓ ಹೇಮಾ,ನಿರ್ದೇಶಕರಾದ ಎನ್.ಆರ್ ಸೀತರಾಮ ರೈ,ಪ್ರವೀಣ್ ಗಿಲ್ಬರ್ಟ್ ಪಿಂಟೋ,ದೇವಕಿ ಡಿ ಶೆಟ್ಟಿ, ಸುಜಾತ,ಕೃಷ್ಣಪ್ಪ,ರಾಜೇಶ್ ಎನ್ ಶೆಟ್ಟಿ, ಸುರೇಶ್ ಅಂಚನ್,ಅಕ್ಷಯ ಕುಮಾರ್,ವಿಜಯ ನಾಯ್ಕ,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಅಭಿನಂದಿಸಿದರು.











