23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಂತಿವನದಲ್ಲಿ 8ನೇ ರಾಷ್ಟ್ರೀಯ ನಿಸರ್ಗೋಪಚಾರ ದಿನಾಚರಣೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಶಾಂತಿವನ ಕೇಂದ್ರದಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ನಸೀಂ ಬಿ.ಐ., ಪಿ.ಎಸ್. ಗ್ರೇಡ್–2, ಕರ್ನಾಟಕ ಸರ್ಕಾರದ ಕಾರ್ಯದರ್ಶಿಯ ವಸತಿ, ವಿಧಾನಸೌಧ, ಬೆಂಗಳೂರು, “ಶಾಂತಿವನ ನನಗೆ ತವರುಮನೆ. ನಾನು ಪ್ರತಿ ಆರು ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಆರೋಗ್ಯವನ್ನು ಪುನರುಜ್ಜೀವನಗೊಳಿಸಿಕೊಂಡಿರುತ್ತೇನೆ. ಇಲ್ಲಿ ಹೆಚ್ಚಿನ ಜಾಹೀರಾತು ಇಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಇಲ್ಲ — ಜನಮುಖೇನ ಬಂದ ಹೆಸರು ಮಾತ್ರ. ಇವರೆಗೂ ನಾನು 6ಕ್ಕಿಂತಲೂ ಹೆಚ್ಚು ಬಾರಿ ಬಂದಿದ್ದೇನೆ. ಇದು ಲಾಭಕ್ಕಾಗಿ ನಡೆಯುವ ಸಂಸ್ಥೆಯಲ್ಲ, ಶುದ್ಧ ಸೇವೆಯ ಮಂದಿರ. 20 ವರ್ಷಗಳಿಂದ ನಾನು ಇದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು. .


ಶಾಂತಿವನ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಪ್ರಕೃತಿ ಚಿಕಿತ್ಸೆಯ ತತ್ವಗಳನ್ನು ಸರಳವಾಗಿ ವಿವರಿಸಿ, ನಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಜೀವನಶೈಲಿಯ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು.
ಡಾ. ಗೀತಾ ಬಿ. ಶೆಟ್ಟಿರವರು ಪ್ರಕೃತಿ ಚಿಕಿತ್ಸಾ ದಿನದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ‘ಸಾಧಕ’ ಎಂಬ ಪದವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಪರಿಕಲ್ಪನೆಯನ್ನು ರೂಪಿಸಿದ ರುದ್ರಪ್ಪ ಅವರ ಸ್ಮರಣೆ ಮಾಡಿಕೊಂಡು, ಸಮಗ್ರ ಜೀವನಶೈಲಿ ಮತ್ತು ಆತ್ಮಸಾಧನೆಯ ಅಗತ್ಯತೆಯನ್ನು ರೇಖಾಂಕಿಸಿದರು.

ಸ್ಥಾನಿಕ ವೈದ್ಯಕೀಯ ಅಧಿಕಾರಿ ಡಾ. ಬಿಂದು ಅವರು ಕೃತಜ್ಞತಾ ಸೂಚನೆ ಸಲ್ಲಿಸಿ ನಂತರ ಸಾಧಕರ ಪರವಾಗಿ ಮಾತನಾಡಿದ ಕೆ.ಕೆ. ಕೆಂಚಣಗೌಡ ಅವರು ತಮ್ಮ ದೀರ್ಘಕಾಲದ ಶಾಂತಿವನ ಅನುಭವವನ್ನು ಹಂಚಿಕೊಂಡು, “ನಾನು ಇಲ್ಲಿ 36 ಬಾರಿ ಬಂದಿದ್ದೇನೆ. ನಾನು ಅಸ್ವಸ್ಥನಾಗಿದ್ದಾಗಲೂ, ಆರೋಗ್ಯವಾಗಿದ್ದಾಗಲೂ, ಸರ್ಜರಿ ಆದಾಗಲೂ, ಮೂಳೆ ಮುರಿದಾಗಲೂ — ಯಾವಾಗಲೂ ಶಾಂತಿವನವೇ ನನ್ನ ನೆಲೆ. ಇಲ್ಲಿ ದೊರೆಯುವ ಸರಳ ಸಲಹೆಗಳು ಮತ್ತು ಸಿಬ್ಬಂದಿಯ ನಗುಮುಖದ ಭರವಸೆ — ರೋಗದ ಅರ್ಧ ಭಾಗವನ್ನು ಅಲ್ಲಿಯೇ ಗುಣಪಡಿಸುತ್ತದೆ” ಎಂದರು.

ವೇದಿಕೆಯಲ್ಲಿ ಡಾ. ಶಿವಪ್ರಸಾದ್ ಶೆಟ್ಟಿ (ಸಿಎಂಒ), ಡಾ. ಗೀತಾ ಬಿ. ಶೆಟ್ಟಿ, ಜಗನ್ನಾಥ್ (ಎಒ), ಸ್ವಸ್ಥಿಕ್ ಭಟ್ (ಮ್ಯಾನೇಜರ್) ಉಪಸ್ಥಿತರಿದ್ದರು.

Related posts

ಮುಳಿಯ ಜ್ಯುವೆಲ್ಸ್‌ನ ಡೈಮಂಡ್ ಫೆಸ್ಟ್‌ಗೆ ಗ್ರಾಹಕರಿಂದ ವ್ಯಾಪಕ ಬೆಂಬಲ; ಮನಮೆಚ್ಚಿದ ವಜ್ರಾಭರಣಗಳ ಖರೀದಿಗೆ ಸಾಲುಗಟ್ಟಿದ ಗ್ರಾಹಕರು

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಲಾಯಿಲ ಬಿಜೆಪಿ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ರಾಜವರ್ಮ ಜೈನ್, ಉಪಾಧ್ಯಕ್ಷರಾಗಿ ಸುಮಿತ್ರಾ ಅವಿರೋಧವಾಗಿ ಆಯ್ಕೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಲಾಯಿಲ ಹಾಗೂ ನಗರ ಮಹಾಶಕ್ತಿಕೇಂದ್ರದ ಸಭೆ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

Suddi Udaya
error: Content is protected !!