Uncategorized

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನ ಮoದಿರಕ್ಕೆ ಶ್ರೀಮತಿ ಲಾವಣ್ಯ ಬಲ್ಲಾಳ್ ಭೇಟಿ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರಕ್ಕೆ ಶ್ರೀಮತಿ ಲಾವಣ್ಯ ಬಳ್ಳಾಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆ ಕರ್ನಾಟಕ ಸರ್ಕಾರ ಬೆಂಗಳೂರು ಇವರು ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ವತಿಯಿಂದ ಶಿಶಿಲದ ವಂಶಸ್ಥರಾದ ಶ್ರೀಮತಿ ಲಾವಣ್ಯ ಬಳ್ಳಾಲ್ ಅವರನ್ನು ಸನ್ಮಾನಿಸಲಾಯಿತು . ಸಭೆಯಲ್ಲಿ ಡಾ. ಕೆ. ಜಯಕೀರ್ತಿ ಜೈನ್ ಪದ್ಮಾoಜಲಿ ಧರ್ಮಸ್ಥಳ, ಮಹೇಂದ್ರವರ್ಮ ಉಪ್ಪಿನಂಗಡಿ, ಭುಜಬಲಿ ಧರ್ಮಸ್ಥಳ, ವಿಜಯಕುಮಾರ್ ಸಿದ್ದಾರ್ಥ ನಿಲಯ, ಜಿನರಾಜ ಪೂವಣಿ ಉಜಿರೆ, ಫಣಿರಾಜ್ ಜೈನ್ ಕೊಕ್ಕಡ, ರಾಜೇಂದ್ರ ಕುಮಾರ್ ಮೂಡಾರ್, ಧನ ಕೀರ್ತಿ ಧರ್ಮಸ್ಥಳ, ಮಹಾವೀರ್ ದೆಪ್ಪುನಿ, ಶುಭಕರ್ ಹೆಗ್ಡೆ ಇಜ್ಲಾಂ ಪ್ಪಾಡಿ ಬೀಡು, ಶ್ರೀಮತಿ ಚಂಪಾ ಬೆಳ್ತಂಗಡಿ, ವಿಜಯಕುಮಾರ್ ಬಪ್ಪ ಕೋಡಿ, ಮಹಾವೀರ ಜೈನ್ ಇಜಿಲಾಂಪಾಡಿ, ಸಂತೋಷ್ ಕುಮಾರ್ ನಿರ್ದೇಶಕರು ಭೂ ಅಭಿವೃದ್ಧಿ ಬ್ಯಾಂಕ್, ರತ್ನವರ್ಮ ಜೈನ್ ಕನ್ಯಾಡಿ, ಮನೋಹರ್ ಜೈನ್ ಶಿವಮೊಗ್ಗ, ಶ್ರೀಧರ್ ಹೆಗ್ಡೆ ಪುತ್ತೂರು, ಮಲ್ಲಿನಾಥ ಜೈನ್. ಧರ್ಮಸ್ಥಳ, ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಪದಾಧಿಕಾರಿಗಳು ಉಪಸ್ಥಿತರಿದ್ದು ಸ್ಥಳ ಪುರೋಹಿತರಾದ ಅರಹಂತ ಇಂದ್ರ ಹಾಗೂ ಪ್ರದೀಪ್ ಪುರೋಹಿತರು ಇಜಿಲಾoಪಾಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.ಕೊಕ್ಕಡದ ಫಣಿರಾಜ್ ಜೈನ್ ರವರು ಭೋಜನದ ವ್ಯವಸ್ಥೆ ಮಾಡಿದರು.ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ ಯುವರಾಜ ಪೂವಣಿ ನೆಕ್ಕರಾಜೆ ವಂದಿಸಿದರು.

Related posts

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆಯಲ್ಲಿ 76ನೇ ಗಣರಾಜ್ಯೋತ್ಸವ

Suddi Udaya

ಬಂದಾರು : ‘ಅಕ್ಷರ ಸಿರಿ’ ಪ್ರಶಸ್ತಿ ಪುರಸ್ಕೃತ ದೈ.ಶಿ.ಶಿಕ್ಷಕ ಪ್ರಶಾಂತ್ ಸುವರ್ಣ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭ – ಪ್ರತಿಭಾ ಪುರಸ್ಕಾರ

Suddi Udaya

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ: ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮುಖ್ಯಮಂತ್ರಿಗಳಿಗೆ ಮನವಿ

Suddi Udaya

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya

ಧರ್ಮಸ್ಥಳ ನೇರ್ತನೆ ನಿವಾಸಿ ಜೋಸೆಫ್ ನಿಧನ

Suddi Udaya

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya
error: Content is protected !!