25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಂಚಾಯಿತಿ ಪಂಪ್ ಶೆಡ್ ಗೆ ಕಿಡಿಗೇಡಿಗಳಿಂದ ಹಾನಿ

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯ ಪಂಪ್ ಶೆಡ್ ಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಘಟನೆ ನ.21ರಂದು ನಡೆದಿದೆ.

ಸೀಟು-ಕೊಡಂಗೆ- ಕಾಯರ್ತೋಡಿ ರಸ್ತೆಯ ಸೀಟು ಚಡಾವಿನ ಕೆಳಭಾಗದಲ್ಲಿ ಪಂಚಾಯಿತಿಯ ನಲ್ಲಿ ನೀರಿನ ಬೋರ್ ವೆಲ್, ಪಂಪ್ ಶೆಡ್ ಇದೆ ಇಲ್ಲಿಂದ ನೀರನ್ನು ಕೊಟ್ರೊಟ್ಟು ಎಂಬಲ್ಲಿರುವ ಟ್ಯಾಂಕಿಗೆ ಕೊಂಡೊಯ್ದು, ಗ್ರಾಮದ 200 ಕ್ಕಿಂತ ಅಧಿಕ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಇಲ್ಲಿರುವ ಪಂಪ್ ಶೆಡ್ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ಕಿಡಿಗೇಡಿಗಳು ಶೆಡ್ ನ ಹಲವು ಭಾಗಗಳಿಗೆ ಕಲ್ಲು ಅಥವಾ ಇತರ ಆಯುಧದಿಂದ ಬಡಿದಿದ್ದು ಹಾನಿ ಉಂಟುಮಾಡಿ ಮಾಡಿರುವುದು ಕಂಡು ಬಂದಿದೆ.
ಪಂಪ್ ಶೆಡ್ ಸಮೀಪವೆ ವಿದ್ಯುತ್ ಪರಿವರ್ತಕ, ಶೆಡ್ ಒಳಗೆ ಮೀಟರ್, ಮೈನ್ ಸ್ವಿಚ್, ಸ್ಟಾರ್ಟರ್ ಸಹಿತ ಅನೇಕ ವಿದ್ಯುತ್ ಉಪಕರಣಗಳಿವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಕಿಡಿಗೇಡಿಗಳು ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಮೂಡಿದೆ.

Related posts

ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಕುಮಾರ್ ಗೆ ಗೌರವ

Suddi Udaya

ತ್ರೋಬಾಲ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ಮೋಹನ ಕುಮಾರಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ: ವಾಮನ ನಾಯ್ಕ ಹೃದಯಾಘಾತದಿಂದ ನಿಧನ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ. ಮೈರೋಳ್ತಡ್ಕ, ಮೊಗ್ರು ಒಕ್ಕೂಟ ಹಾಗೂ ಕಣಿಯೂರು ವಲಯದ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಶ್ರಮದಾನ

Suddi Udaya

ಹದಗೆಟ್ಟ ಬಸ್ತಿ -ಪೆರಿಯಡ್ಕ ರಸ್ತೆ: ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕಾರ್ಯ

Suddi Udaya

ಅಳದಂಗಡಿ: ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!