July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಂಚಾಯಿತಿ ಪಂಪ್ ಶೆಡ್ ಗೆ ಕಿಡಿಗೇಡಿಗಳಿಂದ ಹಾನಿ

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯ ಪಂಪ್ ಶೆಡ್ ಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಘಟನೆ ನ.21ರಂದು ನಡೆದಿದೆ.

ಸೀಟು-ಕೊಡಂಗೆ- ಕಾಯರ್ತೋಡಿ ರಸ್ತೆಯ ಸೀಟು ಚಡಾವಿನ ಕೆಳಭಾಗದಲ್ಲಿ ಪಂಚಾಯಿತಿಯ ನಲ್ಲಿ ನೀರಿನ ಬೋರ್ ವೆಲ್, ಪಂಪ್ ಶೆಡ್ ಇದೆ ಇಲ್ಲಿಂದ ನೀರನ್ನು ಕೊಟ್ರೊಟ್ಟು ಎಂಬಲ್ಲಿರುವ ಟ್ಯಾಂಕಿಗೆ ಕೊಂಡೊಯ್ದು, ಗ್ರಾಮದ 200 ಕ್ಕಿಂತ ಅಧಿಕ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಇಲ್ಲಿರುವ ಪಂಪ್ ಶೆಡ್ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ಕಿಡಿಗೇಡಿಗಳು ಶೆಡ್ ನ ಹಲವು ಭಾಗಗಳಿಗೆ ಕಲ್ಲು ಅಥವಾ ಇತರ ಆಯುಧದಿಂದ ಬಡಿದಿದ್ದು ಹಾನಿ ಉಂಟುಮಾಡಿ ಮಾಡಿರುವುದು ಕಂಡು ಬಂದಿದೆ.
ಪಂಪ್ ಶೆಡ್ ಸಮೀಪವೆ ವಿದ್ಯುತ್ ಪರಿವರ್ತಕ, ಶೆಡ್ ಒಳಗೆ ಮೀಟರ್, ಮೈನ್ ಸ್ವಿಚ್, ಸ್ಟಾರ್ಟರ್ ಸಹಿತ ಅನೇಕ ವಿದ್ಯುತ್ ಉಪಕರಣಗಳಿವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಕಿಡಿಗೇಡಿಗಳು ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಮೂಡಿದೆ.

Related posts

ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಉಷಾ. ಕೆ ರವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

Suddi Udaya

ಗುರುವಾಯನಕೆರೆ: ಸ್ಕೂಟಿ- ಬೈಕ್ ಮುಖಾಮುಖಿ ಡಿಕ್ಕಿ,ಸವಾರರಿಬ್ಬರಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

Suddi Udaya

ಸವಣಾಲು ಅ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಸಮಾರಂಭ ಹಾಗೂ ವಿದ್ಯಾರ್ಥಿ ಸಂಘಗಳ ಉದ್ಘಾಟನೆ

Suddi Udaya

6ನೇ ಏಷ್ಯನ್ ಯೋಗಾಸನ ಚಾಂಪಿಯನ್‌ಶಿಪ್ 2025 : ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಆಹ್ವಾನ

Suddi Udaya
error: Content is protected !!