ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಂಚಾಯಿತಿ ಪಂಪ್ ಶೆಡ್ ಗೆ ಕಿಡಿಗೇಡಿಗಳಿಂದ ಹಾನಿ

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯ ಪಂಪ್ ಶೆಡ್ ಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಘಟನೆ ನ.21ರಂದು ನಡೆದಿದೆ.

ಸೀಟು-ಕೊಡಂಗೆ- ಕಾಯರ್ತೋಡಿ ರಸ್ತೆಯ ಸೀಟು ಚಡಾವಿನ ಕೆಳಭಾಗದಲ್ಲಿ ಪಂಚಾಯಿತಿಯ ನಲ್ಲಿ ನೀರಿನ ಬೋರ್ ವೆಲ್, ಪಂಪ್ ಶೆಡ್ ಇದೆ ಇಲ್ಲಿಂದ ನೀರನ್ನು ಕೊಟ್ರೊಟ್ಟು ಎಂಬಲ್ಲಿರುವ ಟ್ಯಾಂಕಿಗೆ ಕೊಂಡೊಯ್ದು, ಗ್ರಾಮದ 200 ಕ್ಕಿಂತ ಅಧಿಕ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಇಲ್ಲಿರುವ ಪಂಪ್ ಶೆಡ್ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ಕಿಡಿಗೇಡಿಗಳು ಶೆಡ್ ನ ಹಲವು ಭಾಗಗಳಿಗೆ ಕಲ್ಲು ಅಥವಾ ಇತರ ಆಯುಧದಿಂದ ಬಡಿದಿದ್ದು ಹಾನಿ ಉಂಟುಮಾಡಿ ಮಾಡಿರುವುದು ಕಂಡು ಬಂದಿದೆ.
ಪಂಪ್ ಶೆಡ್ ಸಮೀಪವೆ ವಿದ್ಯುತ್ ಪರಿವರ್ತಕ, ಶೆಡ್ ಒಳಗೆ ಮೀಟರ್, ಮೈನ್ ಸ್ವಿಚ್, ಸ್ಟಾರ್ಟರ್ ಸಹಿತ ಅನೇಕ ವಿದ್ಯುತ್ ಉಪಕರಣಗಳಿವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಕಿಡಿಗೇಡಿಗಳು ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಮೂಡಿದೆ.

Related posts

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

Suddi Udaya

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಬೆಳ್ತಂಗಡಿ: ಮೇ 30 ರಂದು 11ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

“ತೂಗುಸೇತುವೆಗಳ ಸರದಾರ” ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ನಿಧನ

Suddi Udaya
error: Content is protected !!