.
ಬೆಂಗಳೂರಿನ ಜಾಗೃತಿ ಟ್ರಸ್ಟ್ ನವರು ಭಾನುವಾರ ಕಟೀಲು ಸರಸ್ವತಿ ಭವನದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ಜಾಹಿರಾತು ಚಿತ್ರ ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ ಇವರಿಗೆ “ಯುವ ರತ್ನ” ಪ್ರಶಸ್ತಿ ನೀಡಿ ಗೌರವಿಸಿತು.

ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ, ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್, ಕಿನ್ನಿಗೋಳಿಯ ಭುವನಭಿರಾಮ್ ಉಡುಪ, ಚಲನಚಿತ್ರ ಕಲಾವಿದರದ ಪ್ರಕಾಶ್ ತುಮಿನಾಡು, ಅವಿನಾಶ್ ಶೆಟ್ಟಿ, ಮಂಗಳೂರು ಸಾರಿಗೆ ಇಲಾಖೆಯ ಶ್ರೀಧರ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.











