ಬೆಳ್ತಂಗಡಿ: ಕಳೆದ ವಾರ ಹಳೇಕೋಟೆಯಲ್ಲಿರುವ ಸ್ವಸ್ತಿಕ್ ಆಟೋ ಶೋರೂಮ್/ಗ್ಯಾರೇಜು ಆಕಸ್ಮಿಕವಾಗಿ ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು ಈ ಸಂದರ್ಭದಲ್ಲಿ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ
ಸದಸ್ಯರು ತಮ್ಮಲ್ಲಾದ ಸಹಕಾರವನ್ನು ನೀಡುವ ದೃಷ್ಟಿಯಿಂದ ವರ್ತಕ ಕುಟುಂಬ ಸದಸ್ಯ ರಾಘವೇಂದ್ರ ರವರು ಸ್ಪಂದಿಸಿ ನ. 24 ರಂದು ಸ್ಥಳಕ್ಕೆ ಭೇಟಿ ನೀಡಿ, ಸಂಘದ ಪರವಾಗಿ ದೇಣಿಗೆಯನ್ನು ನೀಡಿದರು.











