September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಷ್ಟ್ರೀಯ ನ್ಯಾಚುರೋಪಥಿ ಉತ್ಸವದಲ್ಲಿ ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಸಮಗ್ರ ಪ್ರಶಸ್ತಿ


ಉಜಿರೆ: ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಕಾಲೇಜು (SDMCNYS), ಉಜಿರೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ (NIN) ಪುಣೆ ಆಯೋಜಿಸಿದ್ದ ನಾಲ್ಕು ದಿನಗಳ ‘ನಿಸರ್ಗಮ್– Healing & Wellness Festival 2025’ ಕಾರ್ಯಕ್ರಮದ ಅಂಗವಾಗಿ ನಡೆದ 8ನೇ ನ್ಯಾಚುರೋಪಥಿ ದಿನಾಚರಣೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಗಳಿಸಿ ಗಮನಸೆಳೆದಿದೆ.

ಈ ವರ್ಷದ ಉತ್ಸವದ ವಿಷಯ “ನ್ಯಾಚುರೋಪಥಿಯ ಮೂಲಕ ಸಹಜವಾಗಿ ತೂಕ ಇಳಿಕೆ” ಆಗಿತ್ತು. ಸಮಾರೋಪ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿದ್ದು, ಮಹಾರಾಷ್ಟ್ರ ರಾಜ್ಯಪಾಲಾ ಆಚಾರ್ಯ ದೇವವ್ರತ, ಸಂಸದ ಮತ್ತು ಕೇಂದ್ರ AYUSH ಸಚಿವ ಪ್ರತಾಪರಾವ್ ಜಾಧವ್, ಡಾ. ಕವಿತಾ ಜೈನ್, ಅಮರೆಂದ್ರ ಸಿಂಗ್, ಮತ್ತು ಅಂಚೆ ಇಲಾಖೆಯ ಅಧಿಕಾರಿ ಶ್ರೀಮತಿ ಸುಚಿತಾ ಜೋಶಿ ಅವರ ಸಾರಥ್ಯದಲ್ಲಿ ಜರುಗಿತು.

ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಮೂರು ದಿನಗಳ ಸಸ್ಯಾಹಾರಿ ಆಹಾರ ಉತ್ಸವದಲ್ಲಿ , ನೈಸರ್ಗಿಕ ಆಹಾರ ತಯಾರಿಕೆ, ಆಹಾರ ಪ್ರದರ್ಶನಗಳು ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ವೈವಿಧ್ಯಮಯ ಕಾರ್ಯಕ್ರಮಗಳು ನಡೆಸಲ್ಪಟ್ಟವು.
ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ , ಆಹಾರಶಾಸ್ತ್ರ ಮತ್ತು ಪೌಷ್ಠಿಕತೆ ವಿಭಾಗದ ಡೀನ್ ಡಾ. ಗೀತಾ ಬಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ 20 ಸದಸ್ಯರ ಎಸ್.ಡಿ.ಎಂ ತಂಡ (17 ವಿದ್ಯಾರ್ಥಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರು ಡಾ. ಸುಹಾಸ್ ಪೈ, ಡಾ. ಗೀತಾಶ್ರೀ ಪೂಜಾರಿ ಮತ್ತು ಡಾ. ಸಾಂಗ್ಬಮ್ ರನಿಟಾ ಕಾಲೇಜನ್ನು ಪ್ರತಿನಿಧಿಸಿ, ಶೈಕ್ಷಣಿಕ, ಸೃಜನಾತ್ಮಕ ಹಾಗೂ ಕೌಶಲ್ಯಾಧಾರಿತವಾದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಹಾಗೂ ಸಮಗ್ರ ಪ್ರದರ್ಶನ ನೀಡಿದರು.

ಇಂಟರ್ನ್ಶಿಪ್ ವಿಭಾಗದಲ್ಲಿ, ಕು.ದಿವ್ಯಾ ಬಿ. ಯು. ಅವರು ಐಡಿಯಾ ಹ್ಯಾಕಥಾನ್‌ನಲ್ಲಿ 1ನೇ ಬಹುಮಾನ ಪಡೆದರು. ಅಂತಿಮ ವರ್ಷದ ವಿದ್ಯಾರ್ಥಿ ಧಾರ್ಮಿಕ ಗಡಾ ಮತ್ತು ತನ್ವಿ ಅವರೊಂದಿಗೆ ಸೇರಿ ವೈದ್ಯಕೀಯ ಕ್ವಿಜ್‌ನಲ್ಲಿ 1ನೇ ಸ್ಥಾನ ಗಳಿಸಿದರು. ದಿವ್ಯಾ ಮತ್ತು ತನ್ವಿ ಬುಕ್ ಬೈಟ್ ಸ್ಪರ್ಧೆಯಲ್ಲಿ 3ನೇ ಬಹುಮಾನ ಕೂಡ ಪಡೆದರು.
ಎರಡನೇ ವರ್ಷದ ವಿದ್ಯಾರ್ಥಿಗಳಲ್ಲಿ, ತನುವಿ ತನಾವತ್ ಅವರು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಇಶಿಕಾ ಬಹುಮಾನಗಳಿಸಿದರು.ಮುಕ್ತ ಪ್ರಬಂಧ ಸ್ಪರ್ಧೆಯಲ್ಲಿ 2ನೇ ಸ್ಥಾನ, ಮತ್ತು ಮಾರ್ಕನ್ ಅವರು ಯೋಗಾಸನ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿದರು.
ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ, ಸ್ಮೃತಿ ಮತ್ತು ತಂಡ ಅವರು ರೀಲ್ ಮೆಕಿಂಗ್ ಸ್ಪರ್ಧೆಯಲ್ಲಿ 1ನೇ ಬಹುಮಾನ ಪಡೆದರು.
ವಿಭಿನ್ನ ವಿಭಾಗಗಳಲ್ಲಿ ಭರ್ಜರಿ ಗೆಲುವುಗಳನ್ನು ದಾಖಲಿಸಿದ ಪರಿಣಾಮ, ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಕಾಲೇಜು ಗೆ ಪ್ರತಿಷ್ಠಿತ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.

Related posts

ಬಜೆಟ್ ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ:ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ : ಶೇಖರ್ ಲಾಯಿಲ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಶೇ.50 ಡಿಸ್ಕೌಂಟ್ ಸೇಲ್

Suddi Udaya

ಚಾರ್ಮಾಡಿ ಘಾಟಿಯಲ್ಲಿ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ

Suddi Udaya

ನ.8: ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಪಡಂಗಡಿ: ಹಿರಿಯ ನಾಗರಿಕ ಧರ್ಣಪ್ಪ ಶೆಟ್ಟಿ ಯವರಿಂದ ಮತ ಚಲಾವಣೆ

Suddi Udaya

ಶಿಶಿಲ ಶ್ರೀ ಚಂದ್ರಪುರ ಜಿನ ಮಂದಿರ ದಲ್ಲಿ ಸ್ವರ್ಗಿಯಶ್ರವಣಬೆಳಗೊಳ ಶ್ರೀಗಳಿಗೆ ವಿನಾಯಂಜಲಿ ಅರ್ಪಣೆ

Suddi Udaya
error: Content is protected !!