ಬೆಳ್ತಂಗಡಿ: ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಕನಸು ಸ್ವಚ್ಛ ಭಾರತ್ ನಿರ್ಮಾಣ ದ ಕನಸು.. ವಿದ್ಯಾವಂತ ರ ನಾಡು ಬುದ್ದಿವಂತರ ಜಿಲ್ಲೆ ನಮ್ಮ ಜಿಲ್ಲೆ ಎಂದು ಹೇಳೆಕೊಳ್ಳಲು ನಮೆಗೆಲ್ಲರೂ ಹೆಮ್ಮೆಯ ವಿಷಯ… ಇದೆಲ್ಲಾ ತಿಳಿದಿರುವ ವಿದ್ಯಾವಂತ ಬುದ್ದಿವಂತ ಜನರು ಮಾಡುವ ಕೆಲಸ ನೀವೇ ನೋಡಿ. ಕುವೆಟ್ಟು ಗ್ರಾಮದ ಗುರುವಾಯನಕೆರೆ -ಕಾರ್ಕಳ ರಸ್ತೆಯ ಶಕ್ತಿನಗರ ವೃತ್ತದ ಸಮೀಪ ಇರುವ ದೈಕುಕ್ಕು ಎಂಬಲ್ಲಿ ಹೆದ್ದಾರಿ ಬದಿಯಿಂದ ಬದ್ಯಾರ್ ಕಡೆಗೆ ಇರುವ ಸಂಪರ್ಕ ರಸ್ತೆ ಪೂರ್ತಿ ಕಸ ಕಡ್ಡಿ, ಕೊಳೆತು ನಾರುವ ಪ್ರಾಣಿಗಳು, ಇನ್ನಿತರ ವಸ್ತು ಗಳನ್ನು ಬಿಸಾಕಿ ತ್ಯಾಜ್ಯ ವಿಲೇವಾರಿ ಘಟಕ ದಂತಾಗಿದೆ..

ಈ ರಸ್ತೆಯಲ್ಲಿ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಸ ಎಸೆಯದಂತೆ ಒಂದು ಎಚ್ಚರಿಕೆಯ ಬೋರ್ಡ್ ಅಳವಡಿಸಲಾಗಿದೆ .ಆದರೂ ಇಲ್ಲಿ ಕಸ ತಂದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಹಾಗೂ ಕಸ ಕಡ್ಡಿ ಬಿಸಾಕುವವರ ಮೇಲೆ ಸೂಕ್ತ ಕ್ರಮ ಜರಗಿಸಿ ದಂಡ ವಿಧಿಸಬೇಕಾಗಿ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
- ವರದಿ: ನೇಸರ ಕಟ್ಟೆ











