24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬದ್ಯಾರ್ ಕಡೆಗೆ ಹೋಗುವ ಸಂಪರ್ಕ ರಸ್ತೆ ಪೂರ್ತಿ ಕಸ ಕಡ್ಡಿ: ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ನಾಗರಿಕರ ಆಗ್ರಹ

ಬೆಳ್ತಂಗಡಿ: ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಕನಸು ಸ್ವಚ್ಛ ಭಾರತ್ ನಿರ್ಮಾಣ ದ ಕನಸು.. ವಿದ್ಯಾವಂತ ರ ನಾಡು ಬುದ್ದಿವಂತರ ಜಿಲ್ಲೆ ನಮ್ಮ ಜಿಲ್ಲೆ ಎಂದು ಹೇಳೆಕೊಳ್ಳಲು ನಮೆಗೆಲ್ಲರೂ ಹೆಮ್ಮೆಯ ವಿಷಯ… ಇದೆಲ್ಲಾ ತಿಳಿದಿರುವ ವಿದ್ಯಾವಂತ ಬುದ್ದಿವಂತ ಜನರು ಮಾಡುವ ಕೆಲಸ ನೀವೇ ನೋಡಿ. ಕುವೆಟ್ಟು ಗ್ರಾಮದ ಗುರುವಾಯನಕೆರೆ -ಕಾರ್ಕಳ ರಸ್ತೆಯ ಶಕ್ತಿನಗರ ವೃತ್ತದ ಸಮೀಪ ಇರುವ ದೈಕುಕ್ಕು ಎಂಬಲ್ಲಿ ಹೆದ್ದಾರಿ ಬದಿಯಿಂದ ಬದ್ಯಾರ್ ಕಡೆಗೆ ಇರುವ ಸಂಪರ್ಕ ರಸ್ತೆ ಪೂರ್ತಿ ಕಸ ಕಡ್ಡಿ, ಕೊಳೆತು ನಾರುವ ಪ್ರಾಣಿಗಳು, ಇನ್ನಿತರ ವಸ್ತು ಗಳನ್ನು ಬಿಸಾಕಿ ತ್ಯಾಜ್ಯ ವಿಲೇವಾರಿ ಘಟಕ ದಂತಾಗಿದೆ..

ಈ ರಸ್ತೆಯಲ್ಲಿ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಸ ಎಸೆಯದಂತೆ ಒಂದು ಎಚ್ಚರಿಕೆಯ ಬೋರ್ಡ್ ಅಳವಡಿಸಲಾಗಿದೆ .ಆದರೂ ಇಲ್ಲಿ ಕಸ ತಂದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಹಾಗೂ ಕಸ ಕಡ್ಡಿ ಬಿಸಾಕುವವರ ಮೇಲೆ ಸೂಕ್ತ ಕ್ರಮ ಜರಗಿಸಿ ದಂಡ ವಿಧಿಸಬೇಕಾಗಿ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

  • ವರದಿ: ನೇಸರ ಕಟ್ಟೆ

Related posts

ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ರಕ್ತದಾನ

Suddi Udaya

ಫೆ.3-7: ಶ್ರೀ ಕ್ಷೇತ್ರ ಓಡೀಲು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಕೋಳಿ ಅಂಕ ಅಪರಾಧವಾಗಿದ್ದು ಕಾನೂನು ಪಾಲಿಸುವಂತೆ ಪೊಲೀಸರಿಗೆ ಡೈರೆಕ್ಟರ್ ಜನರಲ್ ಆದೇಶ

Suddi Udaya

ಬಳಂಜ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಏ.23-24: ಇಚ್ಚಿಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ-ಗುರುಮಂದಿರ ಲೋಕಾರ್ಪಣೆ

Suddi Udaya

ಉರುವಾಲು: ಮಹಡಿಯ ಕಾರಿಡಾರ್‌ನಿಂದ ಆಯತಪ್ಪಿ ತೋಡಿಗೆ ಬಿದ್ದ ಕಾರ್ಮಿಕ ಮೃತ್ಯು

Suddi Udaya
error: Content is protected !!