25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಯ ಸಾಫ್ಟ್ ವೇರ್ ತಂಡದಿಂದ ಶಾಲೆಗೆ ಬಣ್ಣ

ಅರಸಿನಮಕ್ಕಿ : ಇಲ್ಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಹಳೆಯ ಶಾಲಾ ಕಟ್ಟಡದ ದುರಸ್ತಿ ಕಾರ್ಯವು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಡಿ.13ರಂದು ನಡೆಯಿತು.

ಹಳೆಯ, ಹಿರಿಯ ವಿದ್ಯಾರ್ಥಿಯಾದ ಶಿಶಿಲದ ಮುಕುಂದ ದಾಮ್ಲೆ ಯವರು ತಮ್ಮ ಸಾಫ್ರಾನ್ ಟೆಕ್ನಾಲಜಿ ಸಾಫ್ಟ್ ವೇರ್ ಸಂಸ್ಥೆಯ ವೃತ್ತಿ ಸ್ನೇಹಿತರ ತಂಡದೊಂದಿಗೆ ಈ ಕಟ್ಟಡದ ಶಾಲಾ ಕಿಟಕಿ ಬಾಗಿಲುಗಳಿಗೆ ಬಣ್ಣವನ್ನು ಬಳಿಯುವ ಮೂಲಕ ಹೊಸ ಮೆರುಗನ್ನು ನೀಡಿದರು. ಸರಕಾರಿ ಶಾಲೆಗಳ ಉಳಿವಿನ ಮಹದಾಸೆಯನ್ನು ಹೊತ್ತ ಈ ಟೆಕ್ಕಿಗಳ ತಂಡವು ಬೆಂಗಳೂರಿನಿಂದ ಅರಸಿನಮಕ್ಕಿಗೆ ಬಂದು ಶ್ರಮದಾನ ಮಾಡಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ.ಮುಕುಂದ ದಾಮ್ಲೆರವರು ಪ್ರಸ್ತುತ ದಿನಗಳಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾದ ನಾಲ್ಕು ಕಂಪ್ಯೂಟರ್ ಡೆಸ್ಕ್ ಟಾಪ್ ಗಳನ್ನು ನೀಡಿ ಕಲಿಕೆಯ ವಾತಾವರಣ ಇನ್ನೂ ಸುಂದರಗೊಳಿಸುವಲ್ಲಿ ಸಹಕರಿಸಿರುತ್ತಾರೆ.

ಖ್ಯಾತ ಅಂತರಾಷ್ಟ್ರೀಯ ಕಲಾವಿದ, ಪರಿಸರ ಪ್ರೇಮಿ ಮಂಗಳೂರಿನ ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್ ಹೊಳ್ಳರವರು ಪಶ್ಚಿಮ ಘಟ್ಟಗಳ ಉಳಿವು ಕುರಿತು ಜಾಗೃತಿ ಮೂಡಿಸುವ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪಶ್ಚಿಮ ಘಟ್ಟಗಳ ಉಳಿವಿನ ಅವಶ್ಯಕತೆ ವಿದ್ಯಾರ್ಥಿಗಳ ಮನಮುಟ್ಟುವಲ್ಲಿ ಈ ಕಾರ್ಯಕ್ರಮ ಮಹತ್ತರ ಪರಿಣಾಮಕಾರಿಯಾಗಿತ್ತು.
ನಂತರ ವಿದ್ಯಾರ್ಥಿಗಳ ಬರವಣಿಗೆಯನ್ನು ಅಂದಗೊಳಿಸುವ ಅಕ್ಷರ ವಿನ್ಯಾಸ ಕಾರ್ಯಾಗಾರವನ್ನು ದಿನೇಶ್ ಹೊಳ್ಳರವರು ನಡೆಸಿಕೊಟ್ಟರು ಇದರಿಂದಾಗಿ ಉತ್ತಮ ಕೈಬರಹ ಹಾಗೂ ಕಲಾಕೃತಿಗಳನ್ನು ಸುಲಭವಾಗಿ ಕಲಿಯುವ ನೂತನ ವಿಧಾನ ವಿದ್ಯಾರ್ಥಿಗಳು ಕಲಿಯುವಂತಾಯಿತು.
ಇದು ವಿದ್ಯಾರ್ಥಿಗಳ ಮೌಲ್ಯಯುತ ಕಲಿಕೆಗೆ ಅಗತ್ಯವಾದ ಕಾರ್ಯಕ್ರಮವಾಗಿತ್ತು.

ಹಿರಿಯ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷ ವಾಮನ ತಾಮನ್ಕರ್, ಶ್ರೀರಂಗ ದಾಮ್ಲೆ ಅವಿನಾಶ್ ಭಿಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಮಂಜುಳಾರವರು ಮೀನಾಕ್ಷಿ, ಶ್ರೀಚೇತನಾ ಬಿ. ಎಮ್, ಚೇತನಾ ಕುಮಾರಿ, ದಿವ್ಯ , ಸುಧೀಂದ್ರ ಉಪಸ್ಥಿತರಿದ್ದರು.

Related posts

ಉಜಿರೆಯ ಎಸ್ ಎಲ್ ವಿ ಕನ್ಸ್ಟ್ರಕ್ಷನ್ ನ ಸಿವಿಲ್ ಇಂಜಿನಿಯರ್ ಸಂಪತ್ ರತ್ನ ರಾವ್ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿಗೆ ಆಯ್ಕೆ

Suddi Udaya

ಇಲಾಖಾ ಅಧಿಕಾರಿಗಳು ಗೈರು, ಕೊಕ್ಕಡ ಗ್ರಾಮ ಸಭೆ ಮುಂದೂಡಿಕೆ

Suddi Udaya

ಮಂಜು ಶ್ರೀ ಸೀನಿಯ‌ರ್ ಚೇಂಬರ್‌ ಬೆಳ್ತಂಗಡಿ ಘಟಕ: ಅಧ್ಯಕ್ಷರಾಗಿ ಜಾನ್ ಅರ್ವಿನ್ ಡಿ’ಸೋಜ, ಕಾರ್ಯದರ್ಶಿಯಾಗಿ ಶರತ್

Suddi Udaya

ಚೆಸ್ ಪಂದ್ಯಾಟ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಆರಾಧ್ಯ ಲಕ್ಮೀಶ ಭಟ್ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ: ನೂತನ ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಉದ್ಘಾಟನೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya
error: Content is protected !!