23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಉಜಿರೆ: ಮನುಷ್ಯ ಎಲ್ಲ ಜೀವಿಗಳಿಗಿಂತಲೂ  ಶ್ರೇಷ್ಠ  ದೇವರ ಸ್ವರೂಪ ಹಾಗೂ ಆಕಾರ. ಮನುಷ್ಯನ ಪಾಪದ ಲೋಕಕ್ಕೆ ದೇವರ ಉಪದೇಶ,ಜ್ಞಾನ ಎಲ್ಲವನ್ನೂ ,ಎಲ್ಲರನ್ನೂ ಕಾಯುವವನು ದೇವನು.  ಮಾನವತೆಯಿಂದ ದೇವರ ಮತ್ತು ಪರರನ್ನು ,ಮ್ಮಕ್ಕಳನ್ನು  ಪ್ರೀತಿಯಿಂದ   ನೋಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ.ಶಾಂತಿ,ಪ್ರೀತಿ,ಸಹನೆ,ಕ್ಷಮೆಯ ಸಂದೇಶ ಪಾಲಿಸಿದರೆ   ಮಾನವೀಯ ಸಮುದಾಯ ಅರ್ಥಪೂರ್ಣವಾಗುವುದು .  ಬದುಕಿನಲ್ಲಿ ಭರವಸೆ ಇರಿಸಿಕೊಂಡು ಇತರರಲ್ಲಿ  ಮಾನವೀಯತೆ ಮೆರೆದರೆ ಜೀವನ ಸಾರ್ಥಕ ಎಂದು  ಉಜಿರೆಯ  ಸಂತ  ಅಂತೋನಿ ಚರ್ಚ್  ಧರ್ಮಗುರು ರೆ!ಫಾ !ಅಬೆಲ್ ಲೋಬೊ ನುಡಿದರು. 

ಅವರು ಡಿ 20 ರಂದು  ಉಜಿರೆಯ  ಸಾನಿಧ್ಯ ಕೌಶಲ್ಯ ತರಬೇತಿ   ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ,ಕೇಕ್  ಶುಭ ಸಂದೇಶ ನೀಡಿದರು. ಬೆದ್ರಬೆಟ್ಟು ಮಸೀದಿ ಧರ್ಮಗುರು  ಅಬ್ದುಲ್  ರಜಾಕ್ ಹಶ್ಮಿ ಅವರು ಕ್ರಿಸ್ಮಸ್ ಸಂದೇಶ ನುಡಿದು ಶುಭ ಕೋರಿದರು.  ವೇದಿಕೆಯಲ್ಲಿ  ಮಂಗಳೂರು ಮ.ನ.ಪಾ ಸದಸ್ಯ  ಜಗದೀಶ್ ಶೆಟ್ಟಿ,   ಸಾನಿಧ್ಯ ಕೇಂದ್ರದ  ಸಹಕಾರ್ಯದರ್ಶಿ ಪ್ರೊ!ರಾಧಾಕೃಷ್ಣ, ಸಂತೋಷ್ ಸಿಕ್ವೇರಾ,  ಆಡಳಿತಾಧಿಕಾರಿ ಡಾ!ವಸಂತಕುಮಾರ್ ಶೆಟ್ಟಿ  ಉಪಸ್ತಿತರಿದ್ದು ಮಾತನಾಡಿದರು.  ಮಂಗಳೂರಿನ ಶ್ರೀ ಗಣೇಶ ಸೇವಾ  ಟ್ರಸ್ಟ್ ಟ್ರಸ್ಟಿಗಳಾದ ಸ್ಟಿಫನ್ ಪಿಂಟೋ  ಮತ್ತು ರೀಮಾ  ಪಿಂಟೋ ಅವರಿಂದ  ಸಾನಿಧ್ಯ ಕೇಂದ್ರದ ಸಿಬಂದಿಗಳಿಗೆ  ಉಡುಗೊರೆ ನೀಡಲಾಯಿತು. 

ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ   ಎಲ್ಲ ಧರ್ಮಗಳ ಸಾರವೂ ಒಂದೇ .  ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು  ಮುಖ್ಯ. ಕರ್ಮವನ್ನು ಮಾಡು,ಧರ್ಮವನ್ನು ಪಾಲಿಸು, ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದಿರು  ಎಂಬ ಕ್ರಿಸ್ತನ ಸಂದೇಶವನ್ನು ಪಾಲಿಸೋಣ ಎಂದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿಗೆ  ಕ್ರಿಸ್ಮಸ್ ಉಡುಗೊರೆ ನೀಡಲಾಯಿತು.     

ಸಾನಿಧ್ಯ ಕೇಂದ್ರದ  ಸಲಹಾ  ಸಮಿತಿ  ಸದಸ್ಯ ರೋಷನ್ ಸಿಕ್ವೇರಾ  ಸ್ವಾಗತಿಸಿ, ಪ್ರಸ್ತಾವಿಸಿದರು. ಅವರನ್ನು  ಸಾನಿಧ್ಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಮಹೇಶ್ ಕೆ.ನಿರೂಪಿಸಿದ  ಕಾರ್ಯಕ್ರಮದಲ್ಲಿ  ಸಾನಿಧ್ಯ ಕೇಂದ್ರದ  ಶಿಕ್ಷಕಿ ಮಲ್ಲಿಕಾ ವಂದಿಸಿದರು.

Related posts

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸನತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ

Suddi Udaya

ಬಚ್ಚಿರೆ ಬಜ್ಜೈ ವಾಟ್ಸಾಪ್ ಗ್ರೂಪ್ ಸ್ನೇಹ ಸಮ್ಮಿಲನ

Suddi Udaya

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು

Suddi Udaya

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗ 507 ಶಾಲೆಗಳಿಗೆ ರೂ. 2.75 ಕೋಟಿ ಮೊತ್ತದ 4,044 ಜೊತೆ ಡೆಸ್ಕ್ -ಬೆಂಚ್ ವಿತರಣೆ

Suddi Udaya

ಧರ್ಮಸ್ಥಳ ಪ್ರಕರಣದ ಬಗ್ಗೆ ಡಾ| ವೀರೇಂದ್ರ ಹೆಗ್ಗಡೆಯವರ ಮೊದಲ ಪ್ರತಿಕ್ರಿಯೆ: ಆರೋಪಗಳು ಆಧಾರ ರಹಿತ, ತನಿಖೆಯಿಂದ ಸತ್ಯ ಹೊರ ಬರಲಿದೆ: ಡಾ| ಹೆಗ್ಗಡೆ

Suddi Udaya
error: Content is protected !!