July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಉಜಿರೆ: ಮನುಷ್ಯ ಎಲ್ಲ ಜೀವಿಗಳಿಗಿಂತಲೂ  ಶ್ರೇಷ್ಠ  ದೇವರ ಸ್ವರೂಪ ಹಾಗೂ ಆಕಾರ. ಮನುಷ್ಯನ ಪಾಪದ ಲೋಕಕ್ಕೆ ದೇವರ ಉಪದೇಶ,ಜ್ಞಾನ ಎಲ್ಲವನ್ನೂ ,ಎಲ್ಲರನ್ನೂ ಕಾಯುವವನು ದೇವನು.  ಮಾನವತೆಯಿಂದ ದೇವರ ಮತ್ತು ಪರರನ್ನು ,ಮ್ಮಕ್ಕಳನ್ನು  ಪ್ರೀತಿಯಿಂದ   ನೋಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ.ಶಾಂತಿ,ಪ್ರೀತಿ,ಸಹನೆ,ಕ್ಷಮೆಯ ಸಂದೇಶ ಪಾಲಿಸಿದರೆ   ಮಾನವೀಯ ಸಮುದಾಯ ಅರ್ಥಪೂರ್ಣವಾಗುವುದು .  ಬದುಕಿನಲ್ಲಿ ಭರವಸೆ ಇರಿಸಿಕೊಂಡು ಇತರರಲ್ಲಿ  ಮಾನವೀಯತೆ ಮೆರೆದರೆ ಜೀವನ ಸಾರ್ಥಕ ಎಂದು  ಉಜಿರೆಯ  ಸಂತ  ಅಂತೋನಿ ಚರ್ಚ್  ಧರ್ಮಗುರು ರೆ!ಫಾ !ಅಬೆಲ್ ಲೋಬೊ ನುಡಿದರು. 

ಅವರು ಡಿ 20 ರಂದು  ಉಜಿರೆಯ  ಸಾನಿಧ್ಯ ಕೌಶಲ್ಯ ತರಬೇತಿ   ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ,ಕೇಕ್  ಶುಭ ಸಂದೇಶ ನೀಡಿದರು. ಬೆದ್ರಬೆಟ್ಟು ಮಸೀದಿ ಧರ್ಮಗುರು  ಅಬ್ದುಲ್  ರಜಾಕ್ ಹಶ್ಮಿ ಅವರು ಕ್ರಿಸ್ಮಸ್ ಸಂದೇಶ ನುಡಿದು ಶುಭ ಕೋರಿದರು.  ವೇದಿಕೆಯಲ್ಲಿ  ಮಂಗಳೂರು ಮ.ನ.ಪಾ ಸದಸ್ಯ  ಜಗದೀಶ್ ಶೆಟ್ಟಿ,   ಸಾನಿಧ್ಯ ಕೇಂದ್ರದ  ಸಹಕಾರ್ಯದರ್ಶಿ ಪ್ರೊ!ರಾಧಾಕೃಷ್ಣ, ಸಂತೋಷ್ ಸಿಕ್ವೇರಾ,  ಆಡಳಿತಾಧಿಕಾರಿ ಡಾ!ವಸಂತಕುಮಾರ್ ಶೆಟ್ಟಿ  ಉಪಸ್ತಿತರಿದ್ದು ಮಾತನಾಡಿದರು.  ಮಂಗಳೂರಿನ ಶ್ರೀ ಗಣೇಶ ಸೇವಾ  ಟ್ರಸ್ಟ್ ಟ್ರಸ್ಟಿಗಳಾದ ಸ್ಟಿಫನ್ ಪಿಂಟೋ  ಮತ್ತು ರೀಮಾ  ಪಿಂಟೋ ಅವರಿಂದ  ಸಾನಿಧ್ಯ ಕೇಂದ್ರದ ಸಿಬಂದಿಗಳಿಗೆ  ಉಡುಗೊರೆ ನೀಡಲಾಯಿತು. 

ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ   ಎಲ್ಲ ಧರ್ಮಗಳ ಸಾರವೂ ಒಂದೇ .  ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು  ಮುಖ್ಯ. ಕರ್ಮವನ್ನು ಮಾಡು,ಧರ್ಮವನ್ನು ಪಾಲಿಸು, ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದಿರು  ಎಂಬ ಕ್ರಿಸ್ತನ ಸಂದೇಶವನ್ನು ಪಾಲಿಸೋಣ ಎಂದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿಗೆ  ಕ್ರಿಸ್ಮಸ್ ಉಡುಗೊರೆ ನೀಡಲಾಯಿತು.     

ಸಾನಿಧ್ಯ ಕೇಂದ್ರದ  ಸಲಹಾ  ಸಮಿತಿ  ಸದಸ್ಯ ರೋಷನ್ ಸಿಕ್ವೇರಾ  ಸ್ವಾಗತಿಸಿ, ಪ್ರಸ್ತಾವಿಸಿದರು. ಅವರನ್ನು  ಸಾನಿಧ್ಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಮಹೇಶ್ ಕೆ.ನಿರೂಪಿಸಿದ  ಕಾರ್ಯಕ್ರಮದಲ್ಲಿ  ಸಾನಿಧ್ಯ ಕೇಂದ್ರದ  ಶಿಕ್ಷಕಿ ಮಲ್ಲಿಕಾ ವಂದಿಸಿದರು.

Related posts

ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ

Suddi Udaya

ಖೋ-ಖೋ ಪಂದ್ಯಾಟ: ಬಜಿರೆ ಪಿ.ಎಂ.ಶ್ರೀ ಸ.ಉ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕೆಎಮ್ ಜೆ ಗುರುವಾಯನಕೆರೆ ಸರ್ಕಲ್ ವತಿಯಿಂದ ಮದ್ದಡ್ಕದಲ್ಲಿ ಈದ್ ಮಿಲಾದ್ ಸಂಗಮ

Suddi Udaya

ಕಿಲ್ಲೂರು ನಿವಾಸಿ ರಾಯಿ ಶ್ರೀ ನಾಗಭೂಷಣ್ ರಾವ್ ನಿಧನ

Suddi Udaya

ಎ.29-30: ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನಕ್ಕೆ ಹಾಗೂ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀಮಜ್ಜಗದ್ಗುರುಗಳಾದ ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ

Suddi Udaya

ಅಳದಂಗಡಿ ಪ್ರಾ.ಕೃ.ಪ.ಸ.ಸಂಘದ ಚುನಾವಣೆಯ ಕಾಂಗ್ರೆಸ್ ಬೆಂಬಲಿತ ವಿಜೇತ ಹಾಗೂ ಸ್ಪರ್ದಿಸಿದ ಅಭ್ಯರ್ಥಿಗಳಿಂದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

Suddi Udaya
error: Content is protected !!