July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಉಜಿರೆ: ಮನುಷ್ಯ ಎಲ್ಲ ಜೀವಿಗಳಿಗಿಂತಲೂ  ಶ್ರೇಷ್ಠ  ದೇವರ ಸ್ವರೂಪ ಹಾಗೂ ಆಕಾರ. ಮನುಷ್ಯನ ಪಾಪದ ಲೋಕಕ್ಕೆ ದೇವರ ಉಪದೇಶ,ಜ್ಞಾನ ಎಲ್ಲವನ್ನೂ ,ಎಲ್ಲರನ್ನೂ ಕಾಯುವವನು ದೇವನು.  ಮಾನವತೆಯಿಂದ ದೇವರ ಮತ್ತು ಪರರನ್ನು ,ಮ್ಮಕ್ಕಳನ್ನು  ಪ್ರೀತಿಯಿಂದ   ನೋಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ.ಶಾಂತಿ,ಪ್ರೀತಿ,ಸಹನೆ,ಕ್ಷಮೆಯ ಸಂದೇಶ ಪಾಲಿಸಿದರೆ   ಮಾನವೀಯ ಸಮುದಾಯ ಅರ್ಥಪೂರ್ಣವಾಗುವುದು .  ಬದುಕಿನಲ್ಲಿ ಭರವಸೆ ಇರಿಸಿಕೊಂಡು ಇತರರಲ್ಲಿ  ಮಾನವೀಯತೆ ಮೆರೆದರೆ ಜೀವನ ಸಾರ್ಥಕ ಎಂದು  ಉಜಿರೆಯ  ಸಂತ  ಅಂತೋನಿ ಚರ್ಚ್  ಧರ್ಮಗುರು ರೆ!ಫಾ !ಅಬೆಲ್ ಲೋಬೊ ನುಡಿದರು. 

ಅವರು ಡಿ 20 ರಂದು  ಉಜಿರೆಯ  ಸಾನಿಧ್ಯ ಕೌಶಲ್ಯ ತರಬೇತಿ   ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ,ಕೇಕ್  ಶುಭ ಸಂದೇಶ ನೀಡಿದರು. ಬೆದ್ರಬೆಟ್ಟು ಮಸೀದಿ ಧರ್ಮಗುರು  ಅಬ್ದುಲ್  ರಜಾಕ್ ಹಶ್ಮಿ ಅವರು ಕ್ರಿಸ್ಮಸ್ ಸಂದೇಶ ನುಡಿದು ಶುಭ ಕೋರಿದರು.  ವೇದಿಕೆಯಲ್ಲಿ  ಮಂಗಳೂರು ಮ.ನ.ಪಾ ಸದಸ್ಯ  ಜಗದೀಶ್ ಶೆಟ್ಟಿ,   ಸಾನಿಧ್ಯ ಕೇಂದ್ರದ  ಸಹಕಾರ್ಯದರ್ಶಿ ಪ್ರೊ!ರಾಧಾಕೃಷ್ಣ, ಸಂತೋಷ್ ಸಿಕ್ವೇರಾ,  ಆಡಳಿತಾಧಿಕಾರಿ ಡಾ!ವಸಂತಕುಮಾರ್ ಶೆಟ್ಟಿ  ಉಪಸ್ತಿತರಿದ್ದು ಮಾತನಾಡಿದರು.  ಮಂಗಳೂರಿನ ಶ್ರೀ ಗಣೇಶ ಸೇವಾ  ಟ್ರಸ್ಟ್ ಟ್ರಸ್ಟಿಗಳಾದ ಸ್ಟಿಫನ್ ಪಿಂಟೋ  ಮತ್ತು ರೀಮಾ  ಪಿಂಟೋ ಅವರಿಂದ  ಸಾನಿಧ್ಯ ಕೇಂದ್ರದ ಸಿಬಂದಿಗಳಿಗೆ  ಉಡುಗೊರೆ ನೀಡಲಾಯಿತು. 

ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ   ಎಲ್ಲ ಧರ್ಮಗಳ ಸಾರವೂ ಒಂದೇ .  ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು  ಮುಖ್ಯ. ಕರ್ಮವನ್ನು ಮಾಡು,ಧರ್ಮವನ್ನು ಪಾಲಿಸು, ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದಿರು  ಎಂಬ ಕ್ರಿಸ್ತನ ಸಂದೇಶವನ್ನು ಪಾಲಿಸೋಣ ಎಂದರು. ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿಗೆ  ಕ್ರಿಸ್ಮಸ್ ಉಡುಗೊರೆ ನೀಡಲಾಯಿತು.     

ಸಾನಿಧ್ಯ ಕೇಂದ್ರದ  ಸಲಹಾ  ಸಮಿತಿ  ಸದಸ್ಯ ರೋಷನ್ ಸಿಕ್ವೇರಾ  ಸ್ವಾಗತಿಸಿ, ಪ್ರಸ್ತಾವಿಸಿದರು. ಅವರನ್ನು  ಸಾನಿಧ್ಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಮಹೇಶ್ ಕೆ.ನಿರೂಪಿಸಿದ  ಕಾರ್ಯಕ್ರಮದಲ್ಲಿ  ಸಾನಿಧ್ಯ ಕೇಂದ್ರದ  ಶಿಕ್ಷಕಿ ಮಲ್ಲಿಕಾ ವಂದಿಸಿದರು.

Related posts

ಡಿ.19: ಗುರುವಾಯನಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಉಜಿರೆಯ ಶ್ರೀ ಪಂಚಮಿ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಶ್ರೀ ಕ್ಷೇತ್ರ ಧರ್ಮಸ್ಥಳ ಧಮಾ೯ಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಡಾ.ಗುರುರಾಜ ಕರ್ಜಗಿಯವರಿಂದ ಸರ್ವಧರ್ಮ ಸಮ್ಮೇಳನ 91ನೇ ಅಧಿವೇಶನ ಉದ್ಘಾಟನೆ

Suddi Udaya

ಭಾರೀ ಗಾಳಿ ಮಳೆ: ತಾಲೂಕಿನದ್ಯಾಂತ ಹಲವು ಮನೆಗಳಿಗೆ ಮರ ಬಿದ್ದು ಹಾನಿ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅಧಿಕಾರ ಸ್ವೀಕಾರ: ಸುದ್ದಿ ಉದಯ ಪತ್ರಿಕೆ ನೀಡಿ ಸ್ವಾಗತ

Suddi Udaya

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!