ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಮಾಣಿ ಸ್ಥಳೀಯ ಸಂಸ್ಥೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ, ಇದರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಲೋತ್ಸವದಲ್ಲಿ
ವಾಣಿ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳಾದ ಕು. ದಿಯಾ ಆರ್ ಗೌಡ ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ, ಕು.ಸೃಷ್ಟಿ ಎಸ್ ಶೆಟ್ಟಿ ಭಾವಗೀತೆ ಯಲ್ಲಿ ಪ್ರಥಮ, ಕು. ಧಾತ್ರಿ ಆರಿಕ ಕಥೆ ಹೇಳುವ ಸ್ಪರ್ಧೆ ಯಲ್ಲಿ ದ್ವಿತೀಯ, ಕು. ರಾಶಿ ಎಮ್ ಎನ್ ಹಾಗೂ ಮಾ. ಸಮೃದ್ ಪಿ ಅಭಿನಯಗೀತೆಯಲ್ಲಿ ತೃತೀಯ ಮತ್ತು ಮಾ. ಹರ್ಷ ಎಂ. ಎನ್ ಭಾವಗೀತೆ ಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.











