ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಮಂಚಿತ್ತಾಯ(53ವ) ರವರು ಡಿ.21ರಂದು ಅಸೌಖ್ಯಕ್ಕೊಳಗಾದವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಡಿ. 26ರಂದು ನಿಧನರಾಗಿದ್ದಾರೆ.
ಕಳೆದ 14ವರ್ಷಗಳಿಂದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಮೂಲತಃ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದವರಾಗಿದ್ದು ತಂದೆ ಕೃಷ್ಣ ಭಟ್, ಪತ್ನಿ ವಿಶಾಲಾಕ್ಷಿ ಹಾಗೂ ಮಕ್ಕಳಾದ ಪ್ರಜ್ಞಾ, ಪೂಜಾ, ಪೃಥ್ವಿ ಮತ್ತು ಪ್ರಿಯಾ ಹಾಗೂ ಬಂಧು ಬಳಗವ್ನನು ಅಗಲಿದ್ದಾರೆ.











