25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿಭಾ ಸಂಗಮ ಕಾರ್ಯಕ್ರಮ

ಉಜಿರೆ: ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಲದ ನೇತೃತ್ವದಲ್ಲಿ “29ನೇ ವರ್ಷದ ಪ್ರತಿಭಾ ಸಂಗಮ ಕಾರ್ಯಕ್ರಮವು ಡಿ.27 ರಂದು ಸಂಜೆ ಯುವಕ ಮಂಡಲದ ವಠಾರದ ಅರಳಿ ರಂಗ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಆಶೋಕ್ ಕುಕ್ಕೇಶ್ರೀ ವಹಿಸಿಕೊಂಡು ಸಭಾ ಉದ್ಘಾಟಕರಾಗಿ ವಿನಯ್ ಚಂದ್ರ ಉಜಿರೆ ದೀಪಾ ಪ್ರಜ್ವಾಲನೆಯ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ ಬೆಳ್ತಂಗಡಿ, ರವಿಚಂದ್ರ ಗಾಂಧಿನಗರ, ಗಿರೀಶ್ ದೊಂಪದಪಲ್ಕೆ, ವೆಂಕಟೇಶ್ ಆಚಾರ್ಯ ಕಾಶಿಬೆಟ್ಟು , ಮಿತ್ರ ಮಹಿಳಾ ‌ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ಸುರೇಶ್ ಉಪಸ್ಥಿತಿ‌ರಿದ್ದರು.

ಸಂತೋಷ್ ಸಾಲಿಯನ್ ಸ್ವಾಗತಿಸಿ, ಚೇತನ್ ಬಂಗೇರ ಅರಳಿ, ನಿಶಿತ್ ಬಂಗೇರ ನಾನಿಲ್ದಡಿ ನಿರೂಪಿಸಿ, ಲೋಲಾಕ್ಷೀ ರಾಘವ ಗೌಡ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮ: ಅರಳಿ ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ಊರಿನ ವಿವಿಧ ಪ್ರತಿಭಾ ಕಲೆಯಿಂದ ನೃತ್ಯ .ಗಾಯನ, ಪ್ರಹಸನದ ಮೂಲಕ ಅನಾವರಣಗೊಂಡು ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರ ಮೂಲಕ ತೆಲಿಕೆದ ಬರ್ಸ ಕಾಮಿಡಿ 90 ನಡೆಯಿತು.

Related posts

ಲಾಯಿಲ-ಧರ್ಮಸ್ಥಳ ದಾರಿ ಮಧ್ಯೆ ಮಹಿಳೆಯೊಬ್ಬರ ಕರಿಮಣಿ ಸರ ಕಳೆದು ಹೋಗಿದೆ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಕುರಿತು ಐಇಸಿ ಚಟುವಟಿಕೆ

Suddi Udaya

ನ.26: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನೆ

Suddi Udaya

ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ರವರಿಗೆ ಸ್ನೇಹ ಕೂಟ ಕಾರ್ಯಕ್ರಮ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

Suddi Udaya
error: Content is protected !!