ಮಚ್ಚಿನ: ಶ್ರೀ ವಿದ್ಯಾಸಾಗರ ಸಿ.ಬಿ.ಯಸ್.ಇ ಶಾಲೆಯಲ್ಲಿ ಮಕ್ಕಳ ಆಹಾರ ಮೇಳ ಡಿ.28ರಂದು ನಡೆಯಿತು.
ಮಕ್ಕಳ ಆಹಾರ ಮೇಳವನ್ನು ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಪುಷ್ಪಕ್ ಉದ್ಘಾಟಿಸಿದರು.
ಆಹಾರ ಮೇಳದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಶಾಲೆಯ ಆವರಣದಲ್ಲಿ ವ್ಯಾಪಾರ ಮಾಡಿ ತಾವು ಮುಂದಿನ ಉದ್ಯಮಿಗಳೆಂದು ನಮ್ಮನ್ನು ಪರಿಗಣಿಸಿ ಎಂಬಂತೆ ವ್ಯವಹಾರ ತೋರ್ಪಡಿಸಿದರು.
ಈ ಮೇಳದಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಊರರವರು ಭಾಗವಹಿಸಿದ್ದರು.
-ಹರ್ಷ ಬಳ್ಳಮಂಜ











