22.9 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಶೌರ್ಯ ತುರ್ತು ಸ್ಪಂದನಾ ತಂಡಕ್ಕೆ ಅಂತಾರಾಷ್ಟ್ರೀಯ ತರಬೇತುದಾರರಿಂದ ತರಬೇತಿ

ಬೆಳ್ತಂಗಡಿ: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ಸ್ಪಂದನಾ ತಂಡ ಬೆಳ್ತಂಗಡಿ ಇದರ ಸ್ವಯಂಸೇವಕರು ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ (ಈಜು)ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.


ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಅಡ್ಯನಡ್ಕದ ವಾರಾಣಸಿ ಫಾರ್ಮ್ನಲ್ಲಿ ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ ಕೋಚಸ್ ಅಪ್ ಏಷ್ಯಾದ ಸ್ಥಾಪಕ ಜೇರೋಲೆನ್ ಎಲೌಟ್ ಇವರಿಂದ 7 ದಿನದ ತರಬೇತಿ ಕಾರ್ಯಕ್ರಮ ಆರಂಭಗೊಂಡಿದೆ.
ಈಜುಗಾರಿಕೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಪಡೆದ ಇವರು ನೆದರಲ್ಯಾಂಡ್ ದೇಶದಿಂದ ತರಬೇತಿ ನೀಡಲು ಆಗಮಿಸಿರುತ್ತಾರೆ.


ಈಜುಗಾರಿಕೆಯ ಮುಂಚೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ಈಜುವಾಗ ಆರೋಗ್ಯದಲ್ಲಿ ಆಗುವ ಏರುಪೇರುಗಳು, ಅದಕ್ಕೆ ಆರೋಗ್ಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಮಾಹಿತಿಯೊಂದಿಗೆ ಈಜುಗಾರಿಕೆಯಲ್ಲಿ ವಿವಿಧ ಆಯಾಮಗಳ ಪ್ರಾತ್ಯಕ್ಷತೆಯನ್ನು ಈಜು ಕೊಳದಲ್ಲಿ ಮಾಡಿಸಿರುತ್ತಾರೆ.


ತರಬೇತಿ ಸಹಾಯಕರಾಗಿ ಜೇಕೊಬ್, ವಿನಯ್, ಪ್ರಿಯಾಂಕಾ ಸಹಕಾರ ನೀಡಿರುತ್ತಾರೆ.
ತರಬೇತಿಯಲ್ಲಿ ಬೆಳ್ತಂಗಡಿ ತಾಲೂಕು ಸಮಿತಿ ಮಾಸ್ಟರ್ ಅವಿನಾಶ್ ಭಿಡೆ, ಸ್ವಯಂ ಸೇವಕರಾದ ಸಚಿನ್ ಭೀಡೆ, ರಮೇಶ್, ಅನಿಲ್, ಜಯರಾಮ್, ಸತೀಶ್ ನೆರಿಯ, ಶರತ್ ನಿಂತಿಕಲ್ಲು ತರಬೇತಿಯಲ್ಲಿ ಪಾಲ್ಗೊಂಡಿದ್ದು, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಮಾರ್ಗದರ್ಶನ ನೀಡಿರುತ್ತಾರೆ.

Related posts

ಕನ್ನಡ ಸೇನೆ- ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಪುದುವೆಟ್ಟು: ಕಾಪಿನಡ್ಕದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ನಾಶ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ: ಇಂದಬೆಟ್ಟು ಸ.ಹಿ.ಪ್ರಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ಸ್ಟಾರ್ ಲೈನ್ ಶಾಲೆಯಲ್ಲಿ ಗಾಂಧಿ ಜಯಂತಿ ದಿನಾಚರಣೆ

Suddi Udaya

ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣ ಸೇವಿಸಿದ್ದ ಯುವಕ ಮೊಹಮ್ಮದ್ ಫೈಝಲ್‌ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya
error: Content is protected !!