30.7 C
ಪುತ್ತೂರು, ಬೆಳ್ತಂಗಡಿ
April 24, 2026
ಅಪಘಾತಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಕಲ್ಮಂಜ: ಸಂಚಾರಿಸುತ್ತಿರುವಾಗಲೇ ಕಳಚಿ ಬಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಟಯರ್

ಕಲ್ಮಂಜ: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲಾ ಬಳಿ ಸರಕಾರಿ ಬಸ್ ಸಂಚಾರದಲ್ಲಿರುವಾಗಲೇ ಟಯರ್ ಕಳಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದೆ.

ದಾವಣಗೆರೆ- ಮಂಗಳೂರು ಕಡೆ ಸಂಚಾರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್‌ನ ವೀಲ್ ಹಬ್ ತುಂಡರಿಸಿದ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬದಲಿ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸುವ ಕೆಲಸವಾಗಿದೆ.

“ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”:ಸರಕಾರಿ ಬಸ್ ಟಯರ್ ಕಳಚಿ ಬಿದ್ದ ಸಂದರ್ಭವನ್ನು ಸ್ಥಳೀಯರು ಸುದ್ದಿ ಉದಯ ವರದಿಗಾರದೊಂದಿಗೆ ವಿವರಿಸುತ್ತಾ, ಸರಕಾರಿ ಬಸ್ ಗಳು ದಾರಿಮಧ್ಯೆ ಕೆಟ್ಟುನಿಲ್ಲುವುದು, ಟಯರ್ ಬ್ಲಾಸ್ಟ್ ಅಥವಾ ಕಳಚಿ ಬೀಳುವುದು ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ಅನಾಹುತಗಳು ಚಾರ್ಮಾಡಿ ಘಾಟ್ ನಂತಹ ಪ್ರದೇಶಗಳಲ್ಲಿ ನಡೆದರೆ, ಪ್ರಯಾಣಿಕರ ಹಾಗೂ ಚಾಲಕರ ಪ್ರಾಣಕ್ಕೆ ಕಂಟಕ ತರುವಂತಾಗಿದೆ. ಒಟ್ಟಾರೆಯಾಗಿ “ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”. ಸರಕಾರದ ಯೋಜನೆಗಳಿಂದಾಗಿ ರಿಪೇರಿಗೂ ಹಣ ಇಲ್ಲದಂತಾಗಿದೆ. ಬಸ್ಸ್ ಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ಸಂಚಾರಕ್ಕೆ ಬಿಡಬೇಕು ಎಂದು ಹೇಳಿದರು.

Related posts

ನ.14: ಮಡಂತ್ಯಾರು ಪ್ರಾ.ಕೃ.ಪ. ಸಹಕಾರ ಸಂಘ ನೇತೃತ್ವದಲ್ಲಿ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

Suddi Udaya

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಮಡಂತ್ಯಾರು: ಬಟ್ಟೆ ಕಸೂತಿ ತಯಾರಿಕೆಯ ಆರಿ ವರ್ಕ್ ತರಬೇತಿಯ ಉದ್ಘಾಟನೆ

Suddi Udaya

ಕಳಿಯ : ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya

ಧರ್ಮಸ್ಥಳ: ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya
error: Content is protected !!