25.5 C
ಪುತ್ತೂರು, ಬೆಳ್ತಂಗಡಿ
July 23, 2026
ಅಪಘಾತಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಕಲ್ಮಂಜ: ಸಂಚಾರಿಸುತ್ತಿರುವಾಗಲೇ ಕಳಚಿ ಬಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಟಯರ್

ಕಲ್ಮಂಜ: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲಾ ಬಳಿ ಸರಕಾರಿ ಬಸ್ ಸಂಚಾರದಲ್ಲಿರುವಾಗಲೇ ಟಯರ್ ಕಳಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದೆ.

ದಾವಣಗೆರೆ- ಮಂಗಳೂರು ಕಡೆ ಸಂಚಾರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್‌ನ ವೀಲ್ ಹಬ್ ತುಂಡರಿಸಿದ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬದಲಿ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸುವ ಕೆಲಸವಾಗಿದೆ.

“ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”:ಸರಕಾರಿ ಬಸ್ ಟಯರ್ ಕಳಚಿ ಬಿದ್ದ ಸಂದರ್ಭವನ್ನು ಸ್ಥಳೀಯರು ಸುದ್ದಿ ಉದಯ ವರದಿಗಾರದೊಂದಿಗೆ ವಿವರಿಸುತ್ತಾ, ಸರಕಾರಿ ಬಸ್ ಗಳು ದಾರಿಮಧ್ಯೆ ಕೆಟ್ಟುನಿಲ್ಲುವುದು, ಟಯರ್ ಬ್ಲಾಸ್ಟ್ ಅಥವಾ ಕಳಚಿ ಬೀಳುವುದು ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ಅನಾಹುತಗಳು ಚಾರ್ಮಾಡಿ ಘಾಟ್ ನಂತಹ ಪ್ರದೇಶಗಳಲ್ಲಿ ನಡೆದರೆ, ಪ್ರಯಾಣಿಕರ ಹಾಗೂ ಚಾಲಕರ ಪ್ರಾಣಕ್ಕೆ ಕಂಟಕ ತರುವಂತಾಗಿದೆ. ಒಟ್ಟಾರೆಯಾಗಿ “ಬಸ್ಸ್ಗ್ ಗತಿ ಇಜ್ಜಿ, ಸರಕಾರಗ್ ಮತಿ ಇಜ್ಜಿ”. ಸರಕಾರದ ಯೋಜನೆಗಳಿಂದಾಗಿ ರಿಪೇರಿಗೂ ಹಣ ಇಲ್ಲದಂತಾಗಿದೆ. ಬಸ್ಸ್ ಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ ಸಂಚಾರಕ್ಕೆ ಬಿಡಬೇಕು ಎಂದು ಹೇಳಿದರು.

Related posts

ಉಜಿರೆ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ನಗಬೇಕು ಆಗಾಗ ಬದುಕಿನೊಳಗೆ’ ತರಬೇತಿ ಕಾರ್ಯಕ್ರಮ

Suddi Udaya

ಜು.5 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಗೆ ಶೇ. 50 ರಷ್ಟು ರಿಯಾಯಿತಿ

Suddi Udaya

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರಿಂದ ಮುಂಬಯಿ ಬಿಲ್ಲವ ಸಮುದಾಯ ಭವನ, ಗುರುಮಂದಿರ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ :ಪುದುವೆಟ್ಟು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎ.ಟಿ.ಎಲ್ ಫೆಸ್ಟ್

Suddi Udaya
error: Content is protected !!