July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಜ್ಮೀರ್ ಖಾಜಾ ಸಂಸ್ಮರಣೆ; ಸರ್ವಧರ್ಮೀಯ ಐದು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಅಜ್ಮೀರ್ ಖಾಜಾ ಅವರ ಉರೂಸ್ ಕಾರ್ಯಕ್ರಮ ಇಸ್ಲಾಮಿಕ್ ಮಾಸದ ‘ರಜಬ್’ ಈ ತಿಂಗಳಲ್ಲಿ ನಡೆದಿದ್ದು, ಖಾಜಾ ಅವರ ಸಂಸ್ಮರಣಾರ್ಥ ಉದ್ಯಮಿಯೊಬ್ಬರು ಐವರು ಸರ್ವಧರ್ಮೀಯ ಕುಟುಂಬಗಳಿಗೆ ಆಹಾರದ ಕಿಟ್ ಹಂಚುವ ಮೂಲಕ ಮಾದರಿಯಾಗಿದ್ದಾರೆ.

ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆಯವರ ಸಹಕಾರದೊಂದಿಗೆ, ಯುವ ಉದ್ಯಮಿ ಹಾಗೂ ಸಾಮಾಜಿಕ ಸಂಘಟಕ, ಕೊಡುಗೈ ದಾನಿ ಹಾಜಿ ಶಮೀಮ್ ಯೂಸುಫ್ ಮದ್ದಡ್ಕ ಅವರೇ ಈ ಮಾದರಿ ಕಾರ್ಯ ಮಾಡಿದವರು.

ಎಳೆಯ ಮಗುವಿನ ಲಿವರ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಕಡಿರುದ್ಯಾವರದ ಹಿಂದೂ ಕುಟುಂಬವೊಂದಕ್ಕೆ, ಉಳಿದಂತೆ ವಿಕಲಚೇತನರಾಗಿ ಮಲಗಿದಲ್ಲೇ ಇರುವ ಬೆಳ್ತಂಗಡಿ ಸಂಜಯ ನಗರದ ಕುಟುಂಬವೊಂದಕ್ಕೆ, ಮೇಲಂತಬೆಟ್ಟು ಗ್ರಾಮದ ಇಬ್ಬರು ವಿಧವೆಯರು ಹಾಗೂ ಕೂಲಿ ಕೆಲಸಕ್ಕೆ ತೆರಳುತ್ತಿರುವ ಮುಸ್ಲಿಂ ಕುಟುಂಬಕ್ಕೆ ಶಮೀಮ್ ಅವರು ರೇಷನ್ ಕಿಟ್ ಹಸ್ತಾಂತರಿಸಿದರು.

Related posts

ವಲಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸ.ಪ್ರೌ.ಶಾಲೆ ಗೇರುಕಟ್ಟೆ ಪ್ರಥಮ

Suddi Udaya

ಗೇರುಕಟ್ಟೆ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ

Suddi Udaya

ತಾಲೂಕಿನಾದ್ಯಂತ ಧಾರಕಾರ ಮಳೆ -ಅಲರ್ಟ್ ಘೋಷಣೆ

Suddi Udaya

ಕಕ್ಯಪದವು; ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಒಂಭತ್ತನೇ ಸುತ್ತಿನಲ್ಲಿ 7398 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಎಸ್ ಕೆ ಎಸ್ ಎಸ್ ಎಫ್ ಕಕ್ಕಿಂಜೆ ಶಾಖೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya
error: Content is protected !!