27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಬಂಗಾಡಿ ಅರಮನೆಯ ಹಿರಿಯರಾದ ಶತಾಯುಷಿ ರವಿರಾಜ್ ಬಲ್ಲಾಳ್ ವಿಧಿವಶ

ಇಂದಬೆಟ್ಟು: ಬಂಗಾಡಿ ಅರಮನೆಯ ಹಿರಿಯರಾದ , ಬಾಂಗ್ವಾಡಿ ಬಂಗ ಅರಸರ ವಂಶಸ್ಥರಾದ ಶತಾಯುಷಿ ರವಿರಾಜ್ ಬಲ್ಲಾಳ್ (104ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.16 ರಂದು ವಿಧಿವಶರಾಗಿದ್ದಾರೆ.

ಬಂಗ ಅರಸರ ರಾಜಧಾನಿಯಾಗಿದ್ದ ಬಂಗಾಡಿಯ ಅರಮನೆಯನ್ನು ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಇಂದಿಗೂ ರವಿರಾಜ ಬಲ್ಲಾಳ್ ಅವರು ಬಂಗಾಡಿ ಅರಮನೆಯನ್ನು ಸಂರಕ್ಷಿಸಿಕೊಂಡು ಬಂದಿದ್ದರು. ‘ಬಂಗರಸರ ಮೂಲ ಹಾಗೂ ಪರಿಚಯ, ಇವರ ಆಳ್ವಿಕೆಯಲ್ಲಿ ನಿರ್ಮಿಸಿದ ಶ್ರವಣಗುಂಡ, ಶಾಂತಿನಾಥ ಸ್ವಾಮಿಯ ಬಸದಿ, ಜೈನ ಅರಸರ ಕಾಲದಲ್ಲಿ ಇದ್ದ ಪದ್ಧತಿ, ದಕ್ಷಿಣ ಕನ್ನಡ ಜಿಲ್ಲೆಯನ್ನಾಲಿದ ಜೈನ ಅರಸರು, ಹೆಗ್ಗಡೆ ಹಾಗೂ ಬಲ್ಲಾಳರ ಸರ್ವಧರ್ಮದ ಕೊಡುಗೆ ಬಂಗರಸರ ಕಾಲದ ಕೆಲವು ಶಾಸನಗಳು ಶಾಸನದಲ್ಲಿರುವ ನೂನ್ಯತೆಯ ವಿವರ ಬಂಗರಸರ ವಂಶಾವಳಿ ಲಕ್ಷ್ಮಪ್ಪರಸ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರವೂ ಲಕ್ಷ್ಮಪ್ಪ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರಗಳನ್ನು ಬಿ.ರವಿರಾಜ್ ಬಲ್ಲಾಳರು ಸಂಶೋಧಿಸಿ ‘ ಬಂಗ ಅರಸರ ಇತಿಹಾಸ’ ಪುಸ್ತಕವನ್ನು ಬರೆದು ಅದರಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಹಲವಾರು ಲೇಖನಗಳನ್ನು, ಬರಹಗಳನ್ನು ರವಿರಾಜ ಬಲ್ಲಾಳ್ ಅವರು ಬರೆದಿದ್ದಾರೆ.

ಮೃತರು ಇಬ್ಬರು ಪುತ್ರರಾದ ಯಶೋಧರ ಬಲ್ಲಾಳ್, ಅಜಿತ್ ಬಲ್ಲಾಳ್, ಪುತ್ರಿ ಜಯರತ್ನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮಿತ್ತಬಾಗಿಲು ಜನಾರ್ದನ ಗೌಡ ರವರಿಗೆವೀಲ್ ಚೆಯರ್ ಹಸ್ತಾಂತರ

Suddi Udaya

ಶಿಶಿಲ: ಕಂಚಿನಡ್ಕ ನಿವಾಸಿ ಸುಂದರಿ ನಿಧನ

Suddi Udaya

ಬೆಳ್ತಂಗಡಿ ಜೆ.ಎಫ್.ಡಿ ಶಂಕರ್ ರಾವ್ ರವರಿಗೆ ಪ್ರೇರಣಾ ಪುರಸ್ಕಾರ-2025

Suddi Udaya

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ: ಸಾನಿಧ್ಯ ಕಲಶಾಭಿಷೇಕ, ಉತ್ಸವಬಲಿ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

Suddi Udaya
error: Content is protected !!