September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಬಂಗಾಡಿ ಅರಮನೆಯ ಹಿರಿಯರಾದ ಶತಾಯುಷಿ ರವಿರಾಜ್ ಬಲ್ಲಾಳ್ ವಿಧಿವಶ

ಇಂದಬೆಟ್ಟು: ಬಂಗಾಡಿ ಅರಮನೆಯ ಹಿರಿಯರಾದ , ಬಾಂಗ್ವಾಡಿ ಬಂಗ ಅರಸರ ವಂಶಸ್ಥರಾದ ಶತಾಯುಷಿ ರವಿರಾಜ್ ಬಲ್ಲಾಳ್ (104ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.16 ರಂದು ವಿಧಿವಶರಾಗಿದ್ದಾರೆ.

ಬಂಗ ಅರಸರ ರಾಜಧಾನಿಯಾಗಿದ್ದ ಬಂಗಾಡಿಯ ಅರಮನೆಯನ್ನು ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಇಂದಿಗೂ ರವಿರಾಜ ಬಲ್ಲಾಳ್ ಅವರು ಬಂಗಾಡಿ ಅರಮನೆಯನ್ನು ಸಂರಕ್ಷಿಸಿಕೊಂಡು ಬಂದಿದ್ದರು. ‘ಬಂಗರಸರ ಮೂಲ ಹಾಗೂ ಪರಿಚಯ, ಇವರ ಆಳ್ವಿಕೆಯಲ್ಲಿ ನಿರ್ಮಿಸಿದ ಶ್ರವಣಗುಂಡ, ಶಾಂತಿನಾಥ ಸ್ವಾಮಿಯ ಬಸದಿ, ಜೈನ ಅರಸರ ಕಾಲದಲ್ಲಿ ಇದ್ದ ಪದ್ಧತಿ, ದಕ್ಷಿಣ ಕನ್ನಡ ಜಿಲ್ಲೆಯನ್ನಾಲಿದ ಜೈನ ಅರಸರು, ಹೆಗ್ಗಡೆ ಹಾಗೂ ಬಲ್ಲಾಳರ ಸರ್ವಧರ್ಮದ ಕೊಡುಗೆ ಬಂಗರಸರ ಕಾಲದ ಕೆಲವು ಶಾಸನಗಳು ಶಾಸನದಲ್ಲಿರುವ ನೂನ್ಯತೆಯ ವಿವರ ಬಂಗರಸರ ವಂಶಾವಳಿ ಲಕ್ಷ್ಮಪ್ಪರಸ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರವೂ ಲಕ್ಷ್ಮಪ್ಪ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರಗಳನ್ನು ಬಿ.ರವಿರಾಜ್ ಬಲ್ಲಾಳರು ಸಂಶೋಧಿಸಿ ‘ ಬಂಗ ಅರಸರ ಇತಿಹಾಸ’ ಪುಸ್ತಕವನ್ನು ಬರೆದು ಅದರಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಹಲವಾರು ಲೇಖನಗಳನ್ನು, ಬರಹಗಳನ್ನು ರವಿರಾಜ ಬಲ್ಲಾಳ್ ಅವರು ಬರೆದಿದ್ದಾರೆ.

ಮೃತರು ಇಬ್ಬರು ಪುತ್ರರಾದ ಯಶೋಧರ ಬಲ್ಲಾಳ್, ಅಜಿತ್ ಬಲ್ಲಾಳ್, ಪುತ್ರಿ ಜಯರತ್ನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 8 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ

Suddi Udaya

ಧರ್ಮಸ್ಥಳ: ಡಿ ಹರ್ಷೇಂದ್ರ ಕುಮಾರ್ ರವರಿಗೆ ಹುಟ್ಟುಹಬ್ಬದ ಸಂಭ್ರಮ,ಶಾಂತಿವನ ಟ್ರಸ್ಟ್ ನಿಂದ ಗೌರವ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಸಮಾರೋಪ ಸಮಾರಂಭ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಕಾಮೋಡ್ ವೀಲ್ ಚೇರ್ ವಿತರಣೆ

Suddi Udaya
error: Content is protected !!