23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ವೇಣೂರು: ರಾಷ್ಟ್ರ ಸೇವಿಕಾ ಸಮಿತಿಗೆ 90ರ ಸಂಭ್ರಮ: ಗಣವೇಷಧಾರಿ ಸೇವಿಕೆಯರಿಂದ ಪಥ ಸಂಚಲನ

ವೇಣೂರು: ರಾಷ್ಟ್ರ ಸೇವಿಕಾ ಸಮಿತಿಗೆ 90ರ ಸಂಭ್ರಮ ಹಿನ್ನೆಲೆಯಲ್ಲಿ ಗಣವೇಷಧಾರಿ ಸೇವಿಕೆಯರಿಂದ ಜ.17ರಂದು ವೇಣೂರು ಶ್ರೀ ರಾಮ ಭಜನಾ ಮಂದಿರದಿಂದ ಪಥ ಸಂಚಲನ ಹೊರಟು ವೇಣೂರು ಶ್ರೀ ಮಹಾವೀರ ನಗರದ ಭರತೇಶ ಸಭಾ ಭವನದ ವರೆಗೆ ಜರುಗಿತು.

ಬಳಿಕ ಭರತೇಶ ಸಭಾ ಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಶೀಲಾ ಎಸ್. ಹೆಗ್ಡೆ ವಹಿಸಿದ್ದರು. ಜಿಲ್ಲಾ ಬೌದ್ದಿಕ್ ಪ್ರಮುಖ್ ಪ್ರತಿಭಾ ರವರು ಬೌದ್ದಿಕ್ ನ್ನು ನೆರವೇರಿಸಿದರು. ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಸಂಚಾಲಿಕ ಸವಿತಾ ಭಟ್ ಉಪಸ್ಥಿತರಿದ್ದರು. ಪಥ ಸಂಚಲನದಲ್ಲಿ ಸುಮಾರು 500 ಗಣವೇಷಧಾರಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸುಳ್ಯದ ಶಾಸಕಿ ಭಾಗೀರತಿ ಮುರುಳ್ಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಂಘ ಚಾಲಕ ವಿನಯಚಂದ್ರ, ಪ್ರಕಾಶ್ ಪುರೋಹಿತ್ ವೇಣೂರು, ಪುತ್ತೂರು ಜಿಲ್ಲಾ ಸಂಚಾಲಕಿ ಪೂರ್ಣಿಮಾ, ಅಧಿಕಾರಿ ವರ್ಗ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಮೀನಾಕ್ಷಿ, ಪ್ರಾಂತ ಶಾರೀರಿಕ್ ಪ್ರಮುಖ್ ಶಿಲ್ಪಾ, ವಿಭಾಗ ಕಾರ್ಯವಾಹಿಕ ಗಿರಿಜಾ ಭಟ್, ವಿಭಾಗ ಸಹ ಕಾರ್ಯವಾಹಿಕ ಕಲ್ಪನಾ, ಉಡುಪಿ ಜಿಲ್ಲಾ ಕಾರ್ಯವಾಹಿಕ ಶಶಿಕಲಾ ಮಣಿಯಾನಿ, ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್ ರಾಜಲಕ್ಷ್ಮಿ, ವಿಭಾಗ ಸಹ ಶಾರೀರಿಕ ಪ್ರಮುಖ್ ಚಿತ್ರಾಕ್ಷಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯವಾಹಿಕ ಸುಷ್ಮಾ, ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯವಾಹಿಕಾ ವೇದಾವತಿ ಜನಾರ್ಧನ ಸ್ವಾಗತಿಸಿದರು. ವೇಣೂರು ತಾಲೂಕು ಕಾರ್ಯವಾಹಿಕ ರೋಹಿಣಿ ವಂದಿಸಿದರು.

Related posts

ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯರಿಗೆ ಸನ್ಮಾನ

Suddi Udaya

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭದ ಶೋಭಾಯಾತ್ರೆಗೆ ಉಜಿರೆಯಲ್ಲಿ ಗಣ್ಯರಿಂದ ಚಾಲನೆ

Suddi Udaya

ಉಜಿರೆ : ನೇಹಾ ಹೀರೆಮಠ ಹತ್ಯೆಯನ್ನು ಖಂಡಿಸಿ ಎಬಿವಿಪಿ ಬೆಳ್ತಂಗಡಿ ಘಟಕದಿಂದ ಕಪ್ಪುಪಟ್ಟಿ ಪ್ರದರ್ಶಿಸಿ, ರಸ್ತೆ ತಡೆದು ಪ್ರತಿಭಟನೆ

Suddi Udaya

ಬಂದಾರು : ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂತಾಪ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

Suddi Udaya
error: Content is protected !!