July 23, 2026
ಕ್ರೀಡಾ ಸುದ್ದಿ

ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ

ಬೆಳ್ತಂಗಡಿ, ಜ 18:- ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಅಂಡರ್ ಆಮ್೯ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಹನೀಪ್ ವರ್ಷಾರವರ ನೇತ್ರತ್ವದಲ್ಲಿ ಶನಿವಾರ ನಡೆಯಿತು.

    ಪಂದ್ಯಾಟದಲ್ಲಿ 80ರ ದಶಕದಲ್ಲಿ ಆಡುತ್ತಿದ್ದ ತಾಲೂಕಿನ ಹಿರಿಯ ಆಟಗಾರರಾದ ವಿಕ್ರಮ್ ತಂಡದ ದೇವಿ ಪ್ರಸಾದ್, ವೆಲ್ಕಂ ಮದ್ದಡ್ಕ ತಂಡದ ಚಂದ್ರ ಹಾಸ, ಜಿ.ಸಿ.ಬಾಯ್ಸ್ ಗುರುವಾಯನಕೆರೆ ತಂಡದ ಗೋಪಿನಾಥ್ ನಾಯಕ್, ದಾಂದಳೆ ಅಳದಂಗಡಿ ತಂಡದ ಪ್ರದೀಪ್, ಶ್ರೀ ರಾಮ ಉಜಿರೆ ತಂಡದ ಸ್ಟೇನಿ ಜಯಕರ್,ಡೈಮಂಡ್ ತಂಡದ ದಿನೇಶ್ ಬೆಳ್ತಂಗಡಿ, ಅಜೇಯ ತಂಡದ ಬಾನು ಪ್ರಕಾಶ್, ಬ್ಲೂ ಡೈಮಂಡ್ ತಂಡದ ವಿಜಯ್ ಕುಮಾರ್, ರಿಲಯನ್ಸ್ ಪುಂಜಲ್ ಕಟ್ಟೆ ತಂಡದ ಶ್ರೀನಾಥ್ ಹಾಗೂ ಯೆಂಗ್ ಚಾಲೆಂಜರ್ಸ್ ಮುಂಡಾಜೆ ತಂಡದ ನಾಮ್ ದೇವ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಿ ಪ್ರಸಾದ್ ಮಾತನಾಡಿ ಹಳೆಯ ನೆನಪು ಮೆಲುಕು ಹಾಕಿದರು. ಕ್ರೀಡಾಕೂಟದ ಎಲ್ಲಾ ವ್ಯವಸ್ಥಾಪಕರಾಗಿ ಅಕ್ಬರ್ ಬೆಳ್ತಂಗಡಿ, ಪ್ರಸಾದ್ ಪಣಿಕ್ಕರ್, ಇಸ್ಮಾಲಿ ಐ.ಬಿ. ಅಬ್ಬಾಸ್ ಸಂಜಯನಗರ ವಹಿಸಿದ್ದರು.

Related posts

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ; ನಡ ಪ.ಪೂ. ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಶಿಶಿರ್ ಜಯವಿಕ್ರಮ್ ಗೆ ವಾಲಿಬಾಲ್ ವಲಯದ “ಸರ್ವಾಂಗೀಣ ಆಟಗಾರ “ಪ್ರಶಸ್ತಿ

Suddi Udaya

ಜಾವೆಲಿನ್ ಎಸೆತ: ಮಚ್ಚಿನ ಸ.ಪ್ರೌ. ಶಾಲಾ ವಿದ್ಯಾರ್ಥಿ ಮಹಮದ್ ಯಾಸ್ಮಿರ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮಿತ್ತಬಾಗಿಲು ವಿಭಾಷ್ ಮತ್ತು ವಿಭಾ – ಕರಾಟೆ ಅಖಾಡದಲ್ಲಿ ಚಾಂಪಿಯನ್‌ಶಿಪ್‌ ದ್ವಿರತ್ನ ಸಾಧನೆ

Suddi Udaya

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 79 ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜ. 15 ರಂದು ಬಂಗೇರ ಬ್ರಿಗೇಡ್ ನಿಂದ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಪಂದ್ಯಕೂಟ ಆಯೋಜನೆ: ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರರವರಿಂದ ಪತ್ರಿಕಾಗೋಷ್ಠಿ

Suddi Udaya
error: Content is protected !!