September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕತಾರ್ ಕಕ್ಕಿಂಜೆ ಶರೀಅತ್‌ ಕಾಲೇಜು ನೂತನ ಸಮಿತಿಗೆ ಆಯ್ಕೆ

ಬೆಳ್ತಂಗಡಿ : ಕತಾರ್ ಕಕ್ಕಿಂಜೆ ಶರೀಅತ್ ಕಾಲೇಜಿನ ನೂತನ ಸಮಿತಿಯ ರಚನಾ ಸಭೆಯು ದೋಹಾದ ಐನ್‌ ಖಾಲಿದ್‌ನ ಗ್ರೀನ್ಸ್ ರೆಸ್ಟೋರೆಂಟ್ ಹಾಲ್ ನಲ್ಲಿ ನಡೆಯಿತು. ಹಂಝ ಎ.ಕೆ. ಕಿರಾಅತ್ ಪಠಿಸಿದರು. ಝನುದ್ದೀನ್ ಹಾಶಿಮಿ ಉಪನ್ಯಾಸ ನೀಡಿದರು. ಶರಿಆತ್ ಕಾಲೇಜಿನ ಸಾಧನೆ ಹಾಗೂ ಸಮಿತಿಯ ಬಗ್ಗೆ ರಶೀದ್ ಅಬ್ದುಲ್ ಹಮೀದ್ ಮಾಹಿತಿ ನೀಡಿದರು. ರಫೀಕ್ ಯು.ಪಿ. ಮುಖ್ಯ ಅತಿಥಿಯಾಗಿ ಹಮೀದ್ ಫೈಝಿ ಉಸ್ತಾದ್ ಭಾಗವಹಿಸಿದ್ದರು.

ಸಮಿತಿಯ ಕಾರ್ಯದರ್ಶಿ ಉನೈಸ್ ಬಿ.ಎಲ್. ವಾರ್ಷಿಕ ವರದಿ ವಾಚಿಸಿದರು. ರಶೀದ್ ಅಬ್ದುಲ್ ಹಮೀದ್ ನೂತನ ಸಮಿತಿಗೆ ಅಧಿಕೃತ ಚಾಲನೆ ನೀಡಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆದಮ್ ಹೈದ್ರೋಸ್ ಚಾರ್ಮಾಡಿ, ಅಧ್ಯಕ್ಷರಾಗಿ ರಫೀಕ್ ಯು.ಪಿ., ಉಪಾಧ್ಯಕ್ಷರಾಗಿ ಉನೈಜ್ ಬಿ.ಎಲ್., ಹಮೀದ್ ಸೊರಂಗ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎ.ಕೆ., ಕಾರ್ಯದರ್ಶಿಯಾಗಿ ಸಲೀಂ ಯು.ಕೆ, ಇಲ್ಯಾಸ್ ಪಿ.ಕೆ., ಕೋಶಾಧಿಕಾರಿಯಾಗಿ ಉಸ್ಥಾನ್ ಪಿ.ಕೆ., ಸಂಚಾಲಕರಾಗಿ ಝನುದ್ದೀನ್ ಹಾಶಿಮಿ ಉಸ್ತಾದ್, ಮಾಧ್ಯಮ ಪ್ರತಿನಿಧಿಯಾಗಿ ಅಜ್ಜಲ್ ರಹ್ಮಾನ್ ಹಾಗೂ ಅಂಶಾದ್ ಚಾರ್ಮಾಡಿ, ಸಲಹಾ ಸಮಿತಿಯಾಗಿ ರಶೀದ್ ಅಬ್ದುಲ್ ಹಮೀದ್, ಅಕ್ಟರ್ ಎ.ಕೆ., ಆಸೀಫ್ ಎಂ.ಎ. ಆಯ್ಕೆಯಾಗಿದ್ದಾರೆ.

Related posts

ಆರಂಬೋಡಿ ಸ್ಫೂರ್ತಿ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಆಟಿಡೊಂಜಿ ಕೆಸರ್ದ ಗೊಬ್ಬು ವತಿಯಿಂದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್‌ರಿಗೆ ಗೌರವಾರ್ಪಣೆ

Suddi Udaya

ಕಳೆಂಜ : ಮಲ್ಲದಲ್ಲಿ ಚೌಡೇಶ್ವರಿ ದೇವಿ ಪರ್ವ ಸೇವೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ರೆಖ್ಯ : ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ಗುಂಪುಗಳ ನಡುವೆ ಅಹಿತಕರ ಘಟನೆ: ಧರ್ಮಸ್ಥಳ ಠಾಣೆಯಲ್ಲಿ 4 ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ.59 ಲಕ್ಷ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya
error: Content is protected !!