ಉಜಿರೆ: ಅಭ್ಯಾಸ್ ಪದವಿ ಪೂರ್ವ ಕಾಲೇಜು ಪ್ರಗತಿ ನಗರ ಉಜಿರೆಯಲ್ಲಿ ಜ.26 ರಂದು 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲರಾದ ಚಂದ್ರಶೇಖರ ಗೌಡ ಕೆ ಗಣರಾಜ್ಯೋತ್ಸವದ ಔಚಿತ್ಯ ಮತ್ತು ವಿದ್ಯಾರ್ಥಿ ವೃಂದ ದೇಶದ ಏಕತೆ ಮತ್ತು ಸಮಗೃತೆಗೆ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವ ಸಂದೇಶ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಕಾರ್ತಿಕೇಯ ಎಮ್ ಎಸ್ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ಯುವಜನಾಂಗಕ್ಕೆ ಹೇಗೆ ಆದರ್ಶವಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಗಣಿತ ಉಪನ್ಯಾಸಕ ಖಲೀಲ್,ದೈಹಿಕ ಶಿಕ್ಷಕ ದಿನೇಶ್,ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ತ ಡಾ.ವಸಂತ್ ಪೂಜಾರಿ,ಕಾಲೇಜು ಸಿಬ್ಬಂದಿಗಳಾದ ಶಿವಕುಮಾರ್,ಸುಮನ್,ಅನುಷಾ,ಕವಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥನೆಗೈದರು ಕನ್ನಡ ಉಪನ್ಯಾಸಕ ಸುಧೀರ್ ನಿರೂಪಿಸಿದರು.











