July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.30 ರಂದು ಕ್ಷೇತ್ರದ ತಂತ್ರಿಗಳಾದ ಶ್ರೀ ಬ್ರಹ್ಮಶ್ರೀ ಕೆ. ಯು. ಪದ್ಮನಾಭ ತಂತ್ರಿಗಳು ಎಡಮನೆ ನೀಲೆಶ್ವರ ಇವರ ಮಾರ್ಗದರ್ಶನದಲ್ಲಿ ವೈದಿಕ ವಿಧಿವಿಧಾನಗಳು ನಡೆಯಿತು.

ಬೆಳಿಗ್ಗೆ ಗಣಹೋಮ, ಕಲಶ ಪೂಜೆ, ನಾಗ ತಂಬಿಲ, ದೈವಗಳಿಗೆ ತಂಬಿಲ ಸೇವೆ, ಹಸಿರುವಾಣಿ ಸಮರ್ಪಣೆ , ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ ನೆಲ್ಯಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ ‘ ನಡೆಯಿತು. ಸಂಜೆ ಶ್ರೀ ಕಲ್ಲುರ್ಟಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಕೋಟೆ ಚಾಮುಂಡಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರ ಪಾಣಿ ರಾಧಾಕೃಷ್ಣ ಯಡಪಡಿತ್ತಾಯ , ಗೌರವ ಸಲಹೆಗಾರ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಕಾರ್ಯದರ್ಶಿ ಜಯಪ್ರಕಾಶ್ ಹಾರ, ಸದಸ್ಯರಾದ ಶಶಿ ಪುತ್ಯೆಮಜಲು, ಸುರೇಶ ಪಡಿಪಂಡ, ಜಯರಾಮ ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ದಾಮೋದರ ನ್ಯೂ ಆರಿಗ, ಜಯಂತಿ ಹಾರ, ಕುಸುಮ ಪೊಯ್ಯೊಳೆ, ಗಣೇಶ ಹಾರ, ಮೋನಪ್ಪ ಗೌಡ ಕೆಂಪಮುದೇಲು, ನಾಗೇಶ್ ಹಾರ, ದಾಮೋದರ ಮಡ್ಯಲಗುಂಡಿ, ಗಣೇಶ್ ಕಲಾಯಿ, ಮುತ್ತಪ್ಪ ಡೆಂಜ, ವಾಸುದೇವ ಮಂಡೆಕರ, ಬಾಬು ಪುತ್ಯೆಮಜಲು, ಶೇಖರ ಪೂಜಾರಿ, ಗೌರವ್ ಹೊಸಮಜಲು,
ದೈವದ ಪರಿಚಾರಕರಾದ ನೇಮಣ್ಣ ಗೌಡ, ದಾಮೋದರ ಪೂಜಾರಿ, ಹೊನ್ನಪ್ಪ ಗೌಡ , ಸುಂದರ ಗೌಡ , ಶೀನಪ್ಪ ಗೌಡ, ಆನಂದ ಗೌಡ , ವೆಂಕಟರಮಣ, ಮಾಯಿಲ ವಿಭಾಗದವರು, ಗುರುವ, ಹಾರ, ಮುಂಡ, ಪೊಯ್ಯೊಳೆ ಊರಿನ ಹತ್ತು ಸಮಸ್ತರು, ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಟೋಟ ಸ್ಪರ್ಧೆ

Suddi Udaya

ವೈಬ್ರೆಂಟ್ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿರವರಿಗೆ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya

ಗುಂಡ್ಯ: ನಿಂತಿದ್ದ ಕಾರಿನ ಮೇಲೆ ಮಗುಚಿ ಬಿದ್ದ ಕಂಟೇನರ್: ಪ್ರಾಣಾಪಾಯದಿಂದ ಪಾರಾದ ಐವರು

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವತಿಯಿಂದ ಸಾಮಾಜಿಕ ನ್ಯಾಯ ದಿನಾಚರಣೆ

Suddi Udaya

ಮಾಲಾಡಿಯಲ್ಲಿ ಜನಸ್ಪಂದನ ಸಭೆ

Suddi Udaya

ಚಿತ್ರಕಲಾ ಪರೀಕ್ಷೆ: ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!