ಉರುವಾಲು : ಇಲ್ಲಿಯ ಕಾರಿಂಜ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವನಶಾಸ್ತಾರ, ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಫೆ.20ರಿಂದ 22ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಅಂಗವಾಗಿ ಕೊರಿಂಜ ದೇವಸ್ಥಾನದ ಕಾರ್ತಿಕ್ ಹೆಗ್ಡೆ ಪೌರೋಹಿತ್ಯದಲ್ಲಿ ಪದ್ಮನಾಭ ಶಿಲ್ಪಿ ಚಾಮುಂಡೇಶ್ವರಿ ಕೃಪಾ ಪಿಲಿಗೂಡು ಚಪ್ಪರ ಮೂಹೂರ್ತ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಚಪ್ಪರ ಮೂಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಸಮಿತಿಯ ಸುನೀಲ್ ಆಣವು,ಸುಂದರ ಶೆಟ್ಟಿ ಎಂಜಿರಪಲ್ಕೆ,ಶ್ರೀ ಗೋಪಾಲಕೃಷ್ಣ ಗೌಡ, ಅಲೈಮಾರು. ಕೊರಗಪ್ಪ ಪೂಜಾರಿ ಕಾರಿಂಜ, ದರ್ಣಪ್ಪ ನಾಯ್ಕ ಆನಡ್ಯ,ವಿಜಯ್ ಕುಮಾರ್ ಕಲ್ಲಳಿಕೆ,ದಾಸಪ್ಪ ಗೌಡ ಕೋಡ್ಯಡ್ಕ ಸತೀಶ್ ಸಾಲ್ಯಾನ್ ಪಿಲಿಕಲ್ಲು,ದುಗ್ಗಪ್ಪ ಗೌಡ ಮನೆಗಾರಮಜಲು, ಪ್ರಭಾಕರ ಪೊಸಂದೋಡಿ,ಉಮೇಶ್ ಖಂಡಿಗ ಸೇರಿದಂತೆ ಸ್ಥಳೀಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು











