32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಊರವರಿಂದ ಶ್ರಮದಾನ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇ ಶ್ವರ ಸ್ವಾಮಿ ದೇವಸ್ಥಾನದ ಈಶ್ವರ ಗರ್ಭ ಗುಡಿ ಹಾಗೂ ತೀರ್ಥ ಮಂಟಪದ ನವೀಕರಣದ ಪ್ರಯುಕ್ತ ಹಳೆ ಗರ್ಭ ಗುಡಿಯ ನೆಲಸಮ ಮಾಡುವ ಕಾಯಕ ಪಂಚಾಂಗ ನಿರ್ಮಾಣ ಅಂಗಣವನ್ನು ಅಗೆದು ಕಾಂಕ್ರೀಟ್ ಹಾಕುವುದು ಹಾಗೂ ಹತ್ತು ಹಲವು ಕೆಲಸಗಳನ್ನು ಗ್ರಾಮದ ಸುಮಾರು 200 ಹಿಂದೂ ಭಾಂದವರು ಒಟ್ಟು ಸೇರಿ ಶ್ರಮದಾನ ಮಾಡಿದರು.

ಈ ವೇಳೆ ಶ್ರಮದಾನದಿಂದ ದೇವಾಲಯಕ್ಕೆ ಅಂದಾಜು ಸುಮಾರು 4 ಲಕ್ಷಗಳಷ್ಟು ಉಳಿತಾಯವಾಗಿರುತ್ತದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರರು ತಿಳಿಸಿದ್ದು ಈ ರೀತಿಯ ಸಹಕಾರ ಊರಿನ ಭಕ್ತಾದಿಗಳಿಂದ ದೊರಕಿದರೆ ದೇವಾಲಯಗಳ ಅಭಿವೃದ್ಧಿಗೆ ಮುನ್ನುಗಲು ಆಡಳಿತದವರಿಗೆ ಧೈರ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟು ಸೇರಿದ ಎಲ್ಲಾ ಕರಸೇವಕರನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸ್ವಚ್ಛತೆ ಚಪ್ಪರ ಹಾಕುವುದು ಇತ್ಯಾದಿ ಬ್ರಹ್ಮ ಕಲಶದ ಪೂರ್ವ ಭಾವಿ ಕೆಲಸಗಳು ನಡೆಯಲಿದೆ . ಮಾ.29ರಿಂದ ಎ.6 ರವರೆಗೆ ನಡೆಯುವ ಶ್ರೀ ದೇವರ ಬ್ರಹ್ಮಕಲಶ ಇತ್ಯಾದಿಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.

Related posts

ಕೆ.ಎಸ್ಎಂಸಿ ಎ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಬಸ್ ಸಮಸ್ಯೆ: ಜುಲೈ 1ರಂದು ಬೆಳ್ತಂಗಡಿಯಲ್ಲಿ ಶಾಸಕರಿಂದ ಜನಸ್ಪಂದನ ಕಾರ್ಯಕ್ರಮ: ಸಾವ೯ಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ನಯನಾಡು ಸರಕಾರಿ ಪ್ರೌಢಶಾಲೆಗೆ ರೂ. 3.50 ಲಕ್ಷ ಮೌಲ್ಯದ ಪರಿಕರಗಳ ಕೊಡುಗೆ

Suddi Udaya

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ: ಅಸಮಪ೯ಕ ಕಾಮಗಾರಿ ನಿರ್ವಹಣೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

Suddi Udaya

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya
error: Content is protected !!